ಪ್ರಜ್ವಲ್ ಪ್ರಕರಣ, ಎಸ್ಐಟಿ ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್ ದೂರು

82

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ದಾರಿ ತಪ್ಪುತ್ತಿದೆ ಎಂದು ಹೇಳಿ, ಜೆಡಿಎಸ್ ನಾಯಕರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಗುರುವಾರ ದೂರು ಸಲ್ಲಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕರು, ನಾಯಕರು ರಾಜಭವನದಲ್ಲಿ ದೂರು ಸಲ್ಲಿಸಿದರು. ಇದಕ್ಕೂ ಮೊದ್ಲು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಮೊದಲ ದಿನದಿಂದ ಹೇಳುತ್ತಲೇ ಇದ್ದೇನೆ. ಆದರೆ, ಇವರಿಗೆ ಶಿಕ್ಷೆ ಬದಲು ಪ್ರಚಾರ ಬೇಕಿದೆ ಎನಿಸುತ್ತಿದೆ ಎಂದರು.

ಇನ್ನು ಹೆಚ್.ಡಿ ರೇವಣ್ಣ ಪ್ರಕರಣದಲ್ಲಿ ಮಹಿಳೆಯನ್ನು ಇದುವರೆಗೂ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ. ಸಿಆರ್ ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ಯಾ? 5 ದಿನ ಕಳೆದರೂ ಕೋರ್ಟ್ ಗೆ ಯಾಕೆ ಹಾಜರು ಪಡಿಸಿಲ್ಲ? ಈ ಬಗ್ಗೆ ಎಸ್ಐಟಿ ಇದುವರೆಗೂ ಮಾಹಿತಿ ಯಾಕೆ ಹಂಚಿಕೊಂಡಿಲ್ಲ ಎಂದು ಪ್ರಶ್ನಿಸಿದರು.

ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಉತ್ತರಿಸಿದ ಅವರು, ಶಿವಕುಮಾರ್ ಕಥೆಗೆ ನಾನೇ ನಾಯಕನಾಗಬೇಕು. ನಾನೇ ನಿರ್ಮಾಪಕ, ನಿರ್ದೇಶಕ, ಮತ್ತು ಕಥಾ ನಾಯಕ ಎಂದರು.




Leave a Reply

Your email address will not be published. Required fields are marked *

error: Content is protected !!