ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅತಿಯಾದ ಬಿಸಿಲು, ಬಿಸಿಗಾಳಿಯಿಂದ ದೇಶದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಕರ್ನಾಟಕದ ಹಲವು ಕಡೆ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇದೀಗ ಹವಾಮಾನ ಇಲಾಖೆಯ ಖುಷಿಯ ವಿಚಾರ ಹೇಳಿದ್ದು, ದೇಶದಲ್ಲಿ ಬಿಸಿಗಾಳಿ ಕೊನೆಗೊಳ್ಳಲಿದೆ ಎಂದಿದೆ.
ರಾಜಸ್ಥಾನದ ಪಶ್ಚಿಮ ಭಾಗ ಹಾಗೂ ಕೇರಳದಲ್ಲಿ ಮೇ 10ರಂದು ಬಿಸಿಗಾಳಿ ಇರಲಿದೆ. ಬಂಗಾಳಕೊಲ್ಲಿಯಿಂದ ತೇವಾಂಶಭರಿತ ಗಾಳಿ ಬೀಸಲಿದೆ. ಇದ್ದರಿಂದಾಗಿ ಗುಡುಗು ಸಹಿತಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿಗಳು ತಿಳಿಸಿದ್ದಾರೆ.