ಪ್ರಕರ ಬಿಸಿಲು, 24 ಗಂಟೆಯಲ್ಲಿ ಐವರ ಸಾವು

67

ಪ್ರಜಾಸ್ತ್ರ ಸುದ್ದಿ

ರಾಯಚೂರು: ರಾಜ್ಯದಲ್ಲಿ ಈ ವರ್ಷ ಬೇಸಿಗೆ ಅಕ್ಷರಶಃ ನಿಗಿನಿಗಿ ಕೆಂಡವಾಗಿದೆ. ಸರಾಸರಿ 40 ಡಿಗ್ರಿ ಸೆಲ್ಸಿಯಸ್ ಮೇಲೆ ಬಿಸಿಲಿದೆ. ಹಲವು ಜಿಲ್ಲೆಗಳಲ್ಲಿ 42, 43 ಹಾಗೂ 45 ಡಿಗ್ರಿ ಸೆಲ್ಸಿಯಸ್ ಇದೆ. ಇದರ ಪರಿಣಾಮ ರಾಯಚೂರಿನಲ್ಲಿ 24 ಗಂಟೆಯಲ್ಲಿ ಐವರು ಮೃತಪಟ್ಟಿದ್ದಾರೆ.

ಬಟ್ಟೆ ತೊಳೆಯಲು ಹೋದ ವೀರೇಶ ಮಡಿವಾಳ(50), ಗಂಗಮ್ಮ ದೇವದಾಸಿ(60) ಹಾಗೂ ವಿಕಲಚೇತನ 15 ವರ್ಷದ ಬಾಲಕ ಪ್ರದೀಪ ಪೂಜಾರಿ ಮೃತಪಟ್ಟಿದ್ದಾರೆ. ಜಾಲಿಬೆಂಚಿ ಗ್ರಾಮದಲ್ಲಿ 45 ವರ್ಷದ ಹನುಮಂತ ಮುಂಜಾನೆ ಹೊಲಕ್ಕೆ ಹೋಗಿದ್ದರು. ಮಧ್ಯಾಹ್ನ ಬಂದು ಅತಿಯಾದ ಬಾಯಾರಿಕೆಯಿಂದ ನೀರು ಕುಡಿಯುವಷ್ಟರಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇನ್ನು ತುಮಕೂರಲ್ಲಿ ದುರ್ಗಮ್ಮ ಉಪ್ಪಾರ(60) ಎಂಬುವರು ಮೃತಪಟ್ಟಿದ್ದಾರೆ. ನಿರ್ಜಲೀಕರಣದಿಂದ ಮೃತಪಟ್ಟಿರುವ ಸಾಧ್ಯತೆಯಿದೆ.

ಇನ್ನು ರಾಯಚೂರು ತಾಲೂಕಿನ ಶಕ್ತಿನಗರ ವೈಟಿಪಿಎಸ್ ಹತ್ತಿರ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಕಾರು ನಿಲ್ಲಿಸಿದ್ದಾನೆ. ಎಲ್ಲರೂ ಇಳಿದಿದ್ದಾರೆ. ಕಾರು ಹೊತ್ತಿ ಉರಿದಿದೆ.




Leave a Reply

Your email address will not be published. Required fields are marked *

error: Content is protected !!