ರಾಮನಗರ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನ ಹತ್ಯೆ ಮಾಡಿ, ಆತ್ಮಹತ್ಯೆ ನಾಟಕವಾಡಿದ್ದ ಚಾಲಕಿ ಹಾಗೂ ಪ್ರಿಯಕರನನ್ನ ಪೊಲೀಸ್ರು ಬಂಧಿಸಿದ್ದಾರೆ. ರಾಮನಗರ ಟೌನ್ ಪೊಲೀಸ್ರು ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ಕೊಲೆಯಾದ ಸಾದಿಕ ಪಾಷಾ ಪತ್ನಿ ಅಸ್ಮಾ ಬಾನು ಹಾಗೂ ಪ್ರಿಯಕರ ಮಹಮ್ಮದ ರಂಜಾನನ್ನ ಬಂಧಿಸಲಾಗಿದೆ. ಅಕ್ಟೋಬರ್ 13, ಭಾನುವಾರ ಸಾದಿಕ ಪಾಷಾನನ್ನ ಹತ್ಯೆ ಮಾಡಲು ನೋಡಿದ್ದಾರೆ. ಆಗ ಇಬ್ಬರ ನಡುವೆ ಜಗಳವಾಗಿದೆ. ಈತನ ಪತ್ನಿ ಅಸ್ಮಾ ಗಂಡನಿಗೆ ಲಟ್ಟಣಿಗೆಯಿಂದ ತಲೆಗೆ ಹೊಡೆದಿದ್ದಾಳೆ. ಬಳಿಕ ನೆಲಕ್ಕೆ ಬಿದ್ದ ಅವನನ್ನ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ.
ಕೊಲೆಯ ಬಳಿಕ ಅಸ್ಮಾ ಬಾನು ಆತ್ಮಹತ್ಯೆಯೆಂದು ಕಥೆ ಕಟ್ಟಿದ್ದಾಳೆ. ಆದ್ರೆ, ಆಕೆಯ ವರ್ತನೆಯನ್ನ ಗಮನಿಸಿದ ಮೃತನ ಸಹೋದರ ಬಕಾಸ, ರಾಮನಗರ ಟೌನ್ ಪೊಲೀಸ್ರಿಗೆ ದೂರು ಸಲ್ಲಿಸಿದ್ದಾನೆ. ಪೊಲೀಸ್ರು ತಮ್ಮ ಸ್ಟೈಲಿನಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ. ಪಶ್ಚಿಮ ಬಂಗಾಳಕ್ಕೆ ಹೊರಡಲು ರೈಲ್ವೆ ನಿಲ್ದಾಣದ ಬಳಿ ನಿಂತಿದ್ದ ರಂಜಾನನ್ನ ಬಂಧಿಸಿದ್ದು, ಇಬ್ಬರು ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೃತ ಸಾದಿಕ ಪಾಷಾ, ಈತನ ಪತ್ನಿ ಅಸ್ಮಾ ಬಾನು ಹಾಗೂ ರಂಜಾನ ರೇಷ್ಮೆ ಪಿಲೇಚಾರಿಯಲ್ಲಿ ಕೆಲಸ ಮಾಡ್ತಿದ್ರು. ಈ ವೇಳೆ 27 ವರ್ಷದ ಅಸ್ಮಾ ಹಾಗೂ 20 ವರ್ಷದ ರಂಜಾನ ನಡುವೆ ಸಂಬಂಧ ಬೆಳದಿದೆ. ತಮ್ಮ ಈ ಸಂಬಂಧಕ್ಕೆ ಅಡ್ಡಿಯಾದ ಸಾದಿಕ ಪಾಷಾನನ್ನ ಮುಗಿಸಿದ್ದಾರೆ.