ಪ್ರಜಾಸ್ತ್ರ ಅಪರಾಧ ಸುದ್ದಿ
ಮಡಿಕೇರಿ: ನಿಜಕ್ಕೂ ಅತ್ಯಂತ ಘನಘೋರ ಹತ್ಯೆಯಾಗಿದೆ. ಮನುಷ್ಯರೂಪದ ರಾಕ್ಷಸ 15 ವರ್ಷದ ಬಾಲಕಿಯನ್ನು ಹತ್ಯೆ ಮಾಡಿ, ರುಂಡದೊಂದಿಗೆ ಪರಾರಿಯಾದ ಘಟನೆ ಸೋಮವಾರಪೇಟೆ ತಾಲೂಕಿನ ಮಟ್ಲು ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಪ್ರಕಾಶ್ ಅನ್ನೋ ಹಂತಕ ಇಂತಹ ಕ್ರೂರ ಕೃತ್ಯವೆಸಗಿದ್ದಾನೆ. ಬಾಲಕಿ ನಿನ್ನೆ ಬಂದು ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದಳು. ಗ್ರಾಮದ ಹತ್ತಿರದಲ್ಲಿದ್ದ ಶಾಲೆಯಲ್ಲಿ ಓದುತ್ತಿದ್ದಳು ಹಾಗೂ ಆ ಶಾಲೆಯ ಏಕೈಕ ವಿದ್ಯಾರ್ಥಿನಿಯಾಗಿದ್ದಳು.
ಈ ಹಂತಕ ಪ್ರಕಾಶ್ ಜೊತೆಗೆ ಬಾಲಕಿ ನಿಶ್ಚಿತಾರ್ಥ ಗುರುವಾರ ನಡೆಯುತ್ತಿದ್ದ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಡೆದಿದ್ದರು. ಬಾಲ್ಯ ವಿವಾಹ ಮಾಡಬೇಡಿ ಎಂದು ಪೋಷಕರಿಗೆ ಬುದ್ದಿವಾದ ಹೇಳಿದ್ದರು. ಆದರೆ, ರಾತ್ರಿ ಮನೆಗೆ ನುಗ್ಗಿದ ಪ್ರಕಾಶ್ ಬಾಲಕಿಯನ್ನು ಅಪಹರಿಸಿ ಕಾಡಂಚಿನ ಪ್ರದೇಶದಲ್ಲಿ ಇಂತಹದೊಂದು ಹೇಯ ಕೃತ್ಯವೆಸಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಹಂತಕನ ಬಂಧನಕ್ಕೆ ಬಲೆ ಬೀಸಿದ್ದಾರೆ.