ಪ್ರಜಾಸ್ತ್ರ ಸುದ್ದಿ
ಬಳ್ಳಾರಿ: ಜಿಂದಾಲ್ ಉಕ್ಕಿನ ಕಾರ್ಖಾನೆಯ ನೀರಿನ ಟ್ಯಾಂಕರ್ ಗೆ ಬಿದ್ದು ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಸಂಡೂರು ತಾಲೂಕಿನ ತೋರಣಗಲ್ಲು ಹತ್ತಿರ ಗುರುವಾರ ಸಂಜೆ ನಡೆದಿದೆ.
ಬೆಂಗಳೂರು ಮೂಲದ ಸುಶಾಂತ್, ಚೆನ್ನೈ ಮೂಲದ ಮಹಾದೇವನ್, ಭುವನಹಳ್ಳಿ ಮೂಲದ ಜೆಡೆಪ್ಪ ಮೃತ ದುರ್ದೈವಿಗಳು. ನೀರಿನ ಟ್ಯಾಂಕರ್ ಗೆ ಅಳವಿಡಿಸಲಾಗಿದ್ದ ಪೈಪ್ ನಲ್ಲಿ ಸಮಸ್ಯೆಯಾಗಿದೆ. ನೀರು ನಿಲ್ಲಿಸದೆ ಅದನ್ನು ರಿಪೇರಿ ಮಾಡಲು ಹೋದಾಗ ನೀರಿನ ರಭಸಕ್ಕೆ ಮಹಾದೇವನ್ ಹೊಂಡಕ್ಕೆ ಬಿದ್ದಿದ್ದಾನೆ.
ಮಹಾದೇವನ್ ರಕ್ಷಿಸಲು ಸುಶಾಂತ್, ಜೆಡೆಪ್ಪ ನೀರಿಗೆ ಇಳಿದಿದ್ದಾರೆ. ದುರಾದೃಷ್ಟವಶಾತ್ ಮೂವರು ಮೃತಪಟ್ಟಿದ್ದಾರೆ. ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.