ಬಳ್ಳಾರಿ ಜನರಿಗೆ ಮೋದಿ, ಶ್ರೀರಾಮುಲು ಕೊಟ್ಟ ಚೊಂಬು ಅವರಿಗೆ ಕೊಡಿ: ಸಿಎಂ ಸಿದ್ದರಾಮಯ್ಯ

83

ಪ್ರಜಾಸ್ತ್ರ ಸುದ್ದಿ

ಬಳ್ಳಾರಿ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಂ ಪರವಾಗಿ ಕೂಡ್ಲಗಿಯಲ್ಲಿ ಪ್ರಜಾಧ್ವನಿ-2 ಸಮಾವೇಶ ಸೋಮವಾರ ನಡೆಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಳ್ಳಾರಿ ಜನರಿಗೆ ಮೋದಿ, ಶ್ರೀರಾಮುಲು ನೀಡಿದ ಚೊಂಬು ಅವರಿಗೆ ವಾಪಸ್ ಕೊಡಿ ಎಂದು ಹೇಳಿದರು.

ಆಕ್ಸಿಸ್ ಪ್ರಕಟಿಸಿದ ಸಮೀಕ್ಷೆಗಳನ್ನು ಮೋದಿ ಡಿಲೀಟ್ ಮಾಡಿಸುತ್ತಿದ್ದಾರೆ. ಅವರಿಗೆ ಸೋಲಿನ ಭಯ ಕಾರಣವಾಗಿದೆ. ಮತ್ತೆ ಅಧಿಕಾರಕ್ಕೆ ಬರಲ್ಲ ಅನ್ನೋದು ಗೊತ್ತಾಗಿದೆ. ಹೀಗಾಗಿ ಸಮೀಕ್ಷೆಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ, ಅಂಬಾನಿ, ಅದಾನಿ ಅಂತಹ ಆಗರ್ಭ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇದ್ದರಿಂದಾಗಿ ಮೋದಿ ಯಾರ ಪರ ಎನ್ನುವುದು ಗೊತ್ತಾಗಿದೆ. ಬಳ್ಳಾರಿಯಲ್ಲಿ ಈ.ತುಕಾರಂ ಗೆಲ್ಲಲೇಬೇಕು. ಶ್ರೀರಾಮುಲು ಸೋಲಲೇಬೇಕು. ತುಕಾರಂಗೆ ನೀವು ಆಶೀರ್ವಾದ ಮಾಡಿ ಎಂದರು.




Leave a Reply

Your email address will not be published. Required fields are marked *

error: Content is protected !!