ಪ್ರಜಾಸ್ತ್ರ ಸುದ್ದಿ
ನವದೆಹಲಿ: ಮಂಗಳವಾರ 8 ರಾಜ್ಯಗಳಿಗೆ ನೂತನವಾಗಿ ರಾಜ್ಯಪಾಲರನ್ನ ನೇಮಕ ಮಾಡಿದ ಕೇಂದ್ರ ಸರ್ಕಾರ, ಸಚಿವ ಸಂಪುಟ ವಿಸ್ತರಣೆಗೆ ಮುಂದಾಗಿದೆ. ಸರ್ಕಾರದ ಮೂಲಗಳ ಪ್ರಕಾರ ಜುಲೈ 8ರ ಬೆಳಗ್ಗೆ 10.30ಕ್ಕೆ ಸಚಿವ ಸಂಪುಟ ವಿಸ್ತರಣೆ ಕಾರ್ಯ ನಡೆಯಲಿದೆಯಂತೆ.
ಇಂದು ನಡೆಯಬೇಕಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹಾಗೂ ಪ್ರಧಾನಿ ನಡುವಿನ ಸಭೆ ರದ್ದಾಗಿದೆ. ಆದ್ರೆ, ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ಮಾತ್ರ ಫಿಕ್ಸ್ ಆಗಿದೆಯಂತೆ. ಸುಶೀಲ ಮೋದಿ, ಸರ್ಬಾನಂದ ಸೋನೊವಾಲ್, ಜ್ಯೋತಿರಾದಿತ್ಯ ಸಿಂದಿಯಾ, ಪಶುಪತಿಕುಮಾರ ಪರಾಸ್, ಉತ್ತರ ಪ್ರದೇಶ, ಬಂಗಾಳ, ಮೈತ್ರಿ ಪಕ್ಷಗಳಾದ ಜೆಡಿಯು, ಅಪ್ನಾ ದಳದ ಸಂಸದರು ಸಚಿವ ಸ್ಥಾನದ ಲಿಸ್ಟ್ ನಲ್ಲಿದ್ದಾರೆ.