ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುತ್ತಿದ್ದು, ರೈತರಿಗೆ ಶೂನ್ಯ ಬಡ್ಡಿದರ ಸಾಲ ಮಿತಿಯನ್ನು ಹೆಚ್ಚಿಸುವ ಮೂಲಕ ಖುಷಿಯ ಸುದ್ಧಿ ನೀಡಲಾಗಿದೆ.
ಶೂನ್ಯ ಬಡ್ಡಿದರ ಸಾಲವನ್ನು 3 ಲಕ್ಷದಿಂದ 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಮಧ್ಯಮಾವಧಿ, ಧೀರ್ಘಾವದಿ ಸಾಲ 10 ಲಕ್ಷದಿಂದ 15ಕ್ಕೆ ಏರಿಕೆ ಮಾಡಲಾಗಿದೆ ಅಂತಾ ಹೇಳಿದರು.
ಬಜೆಟ್ ಮಂಡನೆ ಆರಂಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ ವಾಕ್ಯದ ಮೂಲಕ ಪ್ರಾರಂಭಿಸಿದರು. ಒಟ್ಟು 3.27 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸುತ್ತಿದ್ದಾರೆ.