ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ

167

ಪ್ರಜಾಸ್ತ್ರ ಸುದ್ದಿ

ದಾವಣಗೆರೆ: ನೂರು ದಿನಗಳ ಕಾಲ ನೀರು ಹರಿಸುತ್ತೇವೆ ಎಂದು ಹೇಳಿ ಏಕಾಏಕಿ ಭದ್ರಾ ಡ್ಯಾಂನಿಂದ ನೀರು ನಿಲ್ಲಿಸಿರುವುದನ್ನು ಖಂಡಿಸಿ ಬುಧವಾರ ಪ್ರತಿಭಟನೆ ನಡೆಸಿದರು. ಡ್ಯಾಂನಿಂದ ನೀರು ಬಿಡುವುದಾಗಿ ಹೇಳಿದ ಮೇಲೆ ರೈತರು ಭತ್ತ ನಾಟಿ ಮಾಡಿದ್ದರು. ಈಗ ನೋಡಿದರೆ ನೀರು ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿ, ಟೈಯರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದರು. ಒಂದೂವರೆ ಲಕ್ಷ ಎಕರೆ ಪ್ರದೇಶದಲ್ಲಿ ರೈತರು ಭತ್ತ ನಾಟಿ ಮಾಡಿದ್ದಾರೆ. ಇದನ್ನು ನಂಬಿ ಲಕ್ಷಾಂತರ ರೈತರು ಬದುಕುತ್ತಿದ್ದಾರೆ. ಕಾಡಾ ಸಮಿತಿ, ರಾಜ್ಯ ಸರ್ಕಾರ ಆಗಸ್ಟ್ 10ರಿಂದ ನೂರು ದಿನ ನೀರು ಬಿಡುವುದಾಗಿ ಆದೇಶ ಹೊರಡಿಸಿತ್ತು. ಈಗ ನೀರು ನಿಲ್ಲಿಸಿದೆ ಎಂದು ಕಿಡಿ ಕಾರಿದರು.

ಇನ್ನು 60 ದಿನಗಳ ಕಾಲ ನೀರು ಬಿಡೆದೆ ಹೋದರೆ 500 ಟ್ರ್ಯಾಕ್ಟರ್ ತಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ. ನೀರಿಗಾಗಿ ನಮ್ಮ ಹೋರಾಟ ಮುಂದುವರೆಯುತ್ತೆ. ಇದಕ್ಕೆ ಅವಕಾಶ ಕೊಡದಂತೆ ನೀರು ಹರಿಸಬೇಕು ಎಂದು ರೈತರು ಎಚ್ಚರಿಕೆ ನೀಡಿದರು.




Leave a Reply

Your email address will not be published. Required fields are marked *

error: Content is protected !!