ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮೈಸೂರು: ನೆಲ, ಜಲ, ಭಾಷೆ ವಿಚಾರ ಬಂದರೆ ಹೋರಾಟಕ್ಕೆ ನಾವು ಸದಾ ಸಿದ್ಧ. ಮೂವಿ ಅಸೋಸಿಯೇಷನ್ ನಿಂದ ಕರೆ ಬರುತ್ತೆ. ಆ ಕರೆಗಾಗಿ ನಾವು ಕಾಯುತ್ತಿದ್ದೇವೆ ಎಂದು ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ನಮ್ಮ ಇಡೀ ಕುಟುಂಬ, ಚಿತ್ರರಂಗ ಇದಕ್ಕಾಗಿ ಬದ್ಧವಾಗಿದೆ. ಕಾವೇರಿ ಹೋರಾಟಕ್ಕೆ ಹೋಗುವುದು ನಮ್ಮ ಧರ್ಮ. ರೈತರಿಂದ ಮೂವಿ ಅಸೋಸಿಯೇಷನ್ ಗೆ ಕರೆ ಬರುತ್ತೆ. ಆಗ ನಾವು ಕುಳಿತುಕೊಂಡು ಮಾತನಾಡುತ್ತೇವೆ. ಸರ್ಕಾರಿ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ನಂತದ ಸಂಘಟನೆಗಳು, ಕಲಾವಿದರೆಲ್ಲ ಒಟ್ಟಿಗೆ ಬರುತ್ತೇವೆ ಎಂದರು.