ಟಿಕೆಟ್ ಹಿಂತಿರುಗಿಸಿದ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ

85

ಪ್ರಜಾಸ್ತ್ರ ಸುದ್ದಿ

ಭುವನೇಶ್ವರ: ಒಡಿಶಾ ರಾಜ್ಯದ ಭುವನೇಶ್ವರದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ಟಿಕೆಟ್ ಹಿಂತಿರುಗಿಸಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷದಿಂದ ಹಣಕಾಸಿನ ನೆರವು ಸಿಗದ ಹಿನ್ನಲೆಯಲ್ಲಿ ಪ್ರಚಾರ ಮಾಡಲು ತೊಂದರೆಯಾಗುತ್ತಿದೆ. ಹೀಗಾಗಿ ಟಿಕೆಟ್ ಹಿಂತಿರುಗಿಸಿರುವುದಾಗಿ ಅಭ್ಯರ್ಥಿ ಸುಚರಿತಾ ಮೊಹಂತಿ ಹೇಳಿದ್ದಾರೆ.

ಸಂಬಳ ಪಡೆಯುವ ಪತ್ರಕರ್ತೆಯಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಕಳೆದ 10 ವರ್ಷಗಳ ಹಿಂದೆ ರಾಜಕೀಯ ಪ್ರವೇಶ ಮಾಡಿದ್ದೇನೆ. ಹಣಕಾಸಿನ ನೆರವಿಗಾಗಿ ದೇಣಿಗೆ ಅಭಿಯಾನ ನಡೆಸಿದೆ. ಯಶಸ್ವಿಯಾಗಲಿಲ್ಲ. ಈ ಬಗ್ಗೆ ಪಕ್ಷದ ಮುಖಂಡರಿಗೂ ತಿಳಿಸಿದ್ದೇನೆ. ಆರ್ಥಿಕ ಸಹಾಯವಿಲ್ಲದೆ ಪುರಿ ಅಂತಹ ಕ್ಷೇತ್ರದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಟಿಕೆಟ್ ವಾಪಸ್ ಮಾಡಿದ್ದೇನೆ. ಕಾರ್ಯಕರ್ತೆಯಾಗಿ ಮುಂದುವರೆಯುತ್ತೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!