ದೇಶದಲ್ಲಿ ಇಂದು ಮೂರು ಸಾವು.. ತುಮಕೂರಲ್ಲಿ ಪಾಸಿಟಿವ್

346

ಕರೋನಾ ಮಹಾಮಾರಿಗೆ ದೇಶದಲ್ಲಿ ಇಂದು ಒಂದೇ ದಿನದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಗುಜರಾತನ ಭಾವ್ ನಗರದಲ್ಲಿ 45 ವರ್ಷದ ಮಹಿಳೆ ಸಾವನಪ್ಪಿದ್ದು, ಇದು ಅಲ್ಲಿ 6ನೇ ಸಾವಾಗಿದೆ.

ಪಶ್ಚಿಮ ಬಂಗಾಳದಲ್ಲಿ 54 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇಲ್ಲಿ ಇದು 2ನೇ ಸಾವು. ಇನ್ನು ಪಂಜಾಬನ ಅಮೃತಸಾಗರದಲ್ಲಿ 60 ವರ್ಷದ ವೃದ್ಧ ಸಾವನ್ನಪ್ಪಿದ್ದಾನೆ. ಇಲ್ಲಿಯೂ ಇದು 2ನೇ ಸಾವಿನ ಪ್ರಕರಣ. ಹೀಗೆ ಇಂದು 3 ಜನ ಕರೋನಾಗೆ ಬಲಿಯಾಗಿದ್ದಾರೆ.

ಇನ್ನು ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯೂ ಏರಿಕೆಯಾಗ್ತಿದೆ. ತುಮಕೂರಿನ ಶಿರಾದಲ್ಲಿ ವೃತಪಟ್ಟಿದ್ದ ವ್ಯಕ್ತಿಯ ಮಗನಿಗೂ ಕರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಡಾ.ರಾಕೇಶಕುಮಾರ ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ವೃದ್ಧನೊಂದಿಗೆ ಸಂಪರ್ಕ ಹೊಂದಿದ್ದ 30 ಜನರ ವರದಿ ಬರಬೇಕಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!