ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್: ತೆಲಂಗಾಣದ ವೇಮುಲವಾಡದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಮಂದಿ ಏಕಾಏಕಿ ಅಂಬಾನಿ, ಅದಾನಿ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿದ್ಯಾಕೆ? ಅಂಬಾನಿ, ಅದಾನಿಯಿಂದ ಎಷ್ಟು ಪಡೆದಿದ್ದೀರಿ ಎಂದು ರಾಜಕುಮಾರನೇ ಹೇಳಲಿ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಐದು ವರ್ಷಗಳಿಂದ ಅಂಬಾನಿ, ಅದಾನಿಯನ್ನು ಗುರಿಯಾಗಿಸಿಕೊಂಡು ಇವರು ಮಾತನಾಡುತ್ತಿದ್ದರು. ಈಗ ರಾಜಕುಮಾರ್ ಏಕಾಏಕಿ ಪ್ರಶ್ನಿಸುವುದನ್ನು ನಿಲ್ಲಿಸಿದ್ದಾರೆ. ಹಣ ತುಂಬಿದ ಟೆಂಪೋ ಕಾಂಗ್ರೆಸ್ ಮನೆಗೆ ಬಂದಿದೆಯೇ? ದೇಶದ ಜನತೆಗೆ ಈ ಬಗ್ಗೆ ಉತ್ತರಿಸಬೇಕಿದೆ ಎಂದು ಪ್ರಶ್ನಿಸಿದ್ದಾರೆ.