ರೈತರಿಗೆ ಆತ್ಮಹತ್ಯೆ ಗ್ಯಾರೆಂಟಿ: ಬಿ.ಸಿ ಪಾಟೀಲ

163

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಕೃಷಿ ಸಚಿವ ಬಿ.ಸಿ ಪಾಟೀಲ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ಸರ್ಕಾರದಿಂದ ರೈತರಿಗೆ ಆತ್ಮಹತ್ಯೆ ಗ್ಯಾರೆಂಟಿ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚು ಎಂದರು.

ರಾಜ್ಯ ಸರ್ಕಾರ ಇದ್ದ ಬದ್ದ ಹಣವನ್ನು ಗ್ಯಾರೆಂಟಿಗಳಿಗೆ ಹಂಚುತ್ತಿದ್ದಾರೆ. ಇದರಿಂದಾಗಿ ಸರ್ಕಾರ ದೀವಾಳಿಯಾಗಿದೆ. ಒಬ್ಬೇ ಒಬ್ಬ ಸಚಿವರು ಹೊಲಗಳಿಗೆ ಹೋಗಿ ರೈತರ ಸಮಸ್ಯೆ ಕೇಳಿಲ್ಲ. ಬೆಳೆ ಪರಿಹಾರ ನೀಡಿಲ್ಲ. ಬಿಜೆಪಿ ಆಡಳಿತ ಬಂದ ಮೇಲೆ ರೈತರ ಆತ್ಮಹತ್ಯೆ ಕಡಿಮೆಯಾಗಿತ್ತು. ಈಗ ಮತ್ತೆ ಹೆಚ್ಚುತ್ತಿದೆ ಅಂತಾ ಆರೋಪಿಸಿದರು.

ಇನ್ನು ಪಡಿತರ ಅಕ್ಕಿಯ ಹಣವನ್ನು ಸಹ ಅರ್ಧಂಬರ್ಧ ಕೊಟ್ಟಿದ್ದಾರೆ. ಉದ್ದೇಶಪೂರ್ವಕವಾಗಿ ಸರ್ವರ್ ಬಂದ್ ಮಾಡುವ ಮೂಲಕ ಯಾರಿಗೂ ನೋಂದಣಿ ಮಾಡಲು ಆಗುತ್ತಿಲ್ಲವೆಂದರು.




Leave a Reply

Your email address will not be published. Required fields are marked *

error: Content is protected !!