ರಾಜ್ಯದ ಮೂವರು ಸಂಸದರಿಗೆ ಸಚಿವ ಸ್ಥಾನ?

271

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೇಂದ್ರ ಕೆಲ ಸಚಿವರು ನಿಧನ, ಕೆಲವರು ಎನ್ ಡಿಎ ತೊರೆದು ಹೋಗಿದ್ದು ಹಾಗೂ ಕೆಲ ರಾಜ್ಯಗಳಿಗೆ ರಾಜ್ಯಪಾಲರನ್ನಾಗಿ ನೇಮಿಸಿದ ಕಾರಣಕ್ಕೆ ಕೇಂದ್ರ ಸಚಿವ ಸ್ಥಾನಗಳು ಖಾಲಿ ಇವೆ. ಹೀಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ದೊಡ್ಡ ಮಟ್ಟದ ಪೈಪೋಟಿ ನಡೆದಿದ್ದು, ರಾಜ್ಯದಿಂದ ಮೂವರು ಸಂಸದರಿಗೆ ಸಚಿವ ಸ್ಥಾನ ಸಿಗುತ್ತೆ ಎನ್ನಲಾಗ್ತಿದೆ.

ಕರ್ನಾಟಕದಲ್ಲಿ 23 ಜನ ಬಿಜೆಪಿ ಸಂಸದರಿದ್ದು, ಪ್ರಲ್ಹಾದ ಜೋಶಿ, ಸದಾನಂದಗೌಡ ಸಚಿವರಾಗಿದ್ದಾರೆ. ಸುರೇಶ ಅಂಗಡಿ ಸಹ ಸಚಿವರಾಗಿದ್ದರು. ಅವರ ನಿಧನದಿಂದಾಗಿ ರಾಜ್ಯದಲ್ಲಿ ಇಬ್ಬರು ಕೇಂದ್ರ ಸಚಿವರಿದ್ದಾರೆ. ಹೀಗಾಗಿ ಇಂದು ಬಹುತೇಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗ್ತಿದ್ದು, ಈ ವೇಳೆ ಮೂವರು ಸಂಸದರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ರಾಜ್ಯ ಸಚಿವ ಮುರೇಶ ನಿರಾಣಿ ಹೇಳಿದ್ದಾರೆ.

ಲಿಂಗಾಯತರಿಗೆ 1, ಪರಿಶಿಷ್ಟ ಜಾತಿಗೆ ಒಂದು ಹಾಗೂ ಇನ್ನೊಂದು ಯಾರಿಗೆ ಕೊಡುತ್ತಾರೆ ನೋಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ರಾಜ್ಯ ಸಂಸದರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ರಾಜಕೀಯ ಲೆಕ್ಕಾಚಾರಗಳು ನಡೆದಿವೆ.




Leave a Reply

Your email address will not be published. Required fields are marked *

error: Content is protected !!