40 ದಿನಗಳ ಬಳಿಕ ‘ಮಹಾ’ ಮಂತ್ರಿ ಮಂಡಲ ರಚನೆ

196

ಪ್ರಜಾಸ್ತ್ರ ಸುದ್ದಿ

ಮುಂಬೈ: ಮೈತ್ರಿ ಸರ್ಕಾರ ಕೆಡವಿ ಹೊಸ ಸರ್ಕಾರ ರಚನೆ ಮಾಡಿದ ಏಕನಾಥ್ ಶಿಂಧೆ ಹಾಗೂ ಬಿಜೆಪಿಯ ಮಂತ್ರಿ ಮಂಡಲ 40 ದಿನಗಳ ಬಳಿಕ ರಚನೆಯಾಗಿದೆ. 50:50 ಅನುಪಾತದಲ್ಲಿ ಸಚಿವ ಸಂಪುಟ ರಚಿಸಲಾಗಿದೆ.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 18 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ ಶಿವಸೇನೆಯ 9, ಬಿಜೆಪಿಯ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಭಗಂತ್ ಸಿಂಗ್ ಕೋಶ್ಯಾರಿ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಸಚಿವರಾದವರ ಪಟ್ಟಿ ಹೀಗಿದೆ.

ಚಂದ್ರಕಾಂತ್‌ ಪಾಟೀಲ್‌, ಸುಧೀರ್‌ ಮುಂಗನ್‌ತಿವಾರ್‌, ಗಿರೀಶ್‌ ಮಹಾಜನ್‌, ಸುರೇಶ್‌ ಖಾಡೆ,  ರಾಧಾಕೃಷ್ಣ ವಿಖೆ ಪಾಟೀಲ್‌, ರವೀಂದ್ರ ಚೌಹಾಣ್‌, ಮಂಗಲ್‌ ಪ್ರಭಾತ್‌ ಲೋಧಾ, ವಿಜಯಕುಮಾರ್‌ ಗವಿತ್‌, ಅತುಲ್‌ ಸವೆ ಬಿಜೆಪಿಯಿಂದ ಸಚಿವರಾಗಿದ್ದಾರೆ.

ದಾದಾ ಭುಸೆ, ಶಂಭುರಾಜ್‌ ದೇಸಾಯಿ, ಸಂದೀಪನ್‌ ಭುಮ್ರೆ, ಉದಯ್‌ ಸಮಂತ್‌, ತಾನಜಿ ಸಾವಂತ್‌, ಅಬ್ದುಲ್‌ ಸತ್ತಾರ್‌, ದೀಪಕ್‌ ಕೇಸಾರ್ಕರ್‌, ಗುಲಾಬ್‌ರಾವ್‌ ಪಾಟೀಲ್‌, ಸಂಜಯ್‌ ರಾಥೋಡ್‌ ಶಿವಸೇನೆಯಿಂದ ಮಂತ್ರಿಯಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!