ಪ್ರಜಾಸ್ತ್ರ ಸುದ್ದಿ
ಮುಂಬೈ: ಶಂಭಾಜಿನಗರದ ಜಂಬಾರ್ ಟೋಲ್ ರಸ್ತೆಯ ಹತ್ತಿರ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಜನರು ಮೃತಪಟ್ಟಿದ್ದಾರೆ. ಟ್ರಕ್ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ನಡೆದಿದೆ.
ಸೈಲಾನಿ ಬಾಬಾ ದರ್ಶನ ಪಡೆದು ವಾಪಸ್ ಆಗುತ್ತಿದ್ದ ಬಸ್ಸಿನಲ್ಲಿ 20 ಜನರಿದ್ದರು. ಇವರು ನಾಸಿಕ್ ಜಿಲ್ಲೆಯ ಇಂದಿರಾನಗರ ಮೂಲದವರು. ಅಪಘಾತದಲ್ಲಿ ನಾಲ್ಕು ತಿಂಗಳು ಮಗು ಸೇರಿ 12 ಜನರು ಪ್ರಾಣ ಕಳೆದುಕೊಂಡಿದ್ದಾರೆ.