ಪ್ರಜಾಸ್ತ್ರ ಸುದ್ದಿ
ಕಲಬುರಗಿ: ವೈಕ್ತಿಯೊಬ್ಬ ರೈಲಿನಿಂದ ಇಳಿದು ಕಾರಿನಲ್ಲಿ ಹೋಗುವಾಗ ಐಟಿ ಅಧಿಕಾರಿಗಳು ದಾಳಿ ಮಾಡಿ 2 ಕೋಟಿ ರೂಪಾಯಿ ಜಪ್ತಿ ಮಾಡಿದ್ದಾರೆ. ಶನಿವಾರ ಕಲಬುರಗಿ ರೈಲು ನಿಲ್ದಾಣದ ಹತ್ತಿರ ಈ ದಾಳಿ ನಡೆದಿದೆ.
ಹಣ ಹಾಗೂ ಕಾರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾರು ಮಾಜಿ ಮೇಯರ್ ಒಬ್ಬರಿಗೆ ಸೇರಿದ್ದು ಎಂದು ಹೇಳಲಾಗುತ್ತಿದೆ. ಮೇ 7ರಂದು ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಈ ದಾಳಿ ಮಹತ್ವದ್ದಾಗಿದೆ.