ಅಂಬೇಡ್ಕರ್ ಪ್ರತಿಮೆಗೆ ಅವಮಾನ ಪ್ರಕರಣ, ಆರೋಪಿ ಕುಟುಂಬಸ್ಥರ ಮೇಲೆ ಹಲ್ಲೆ

96

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಕಳೆದ ಜನವರಿ 23ರಂದು ಕೋಟನೂರು(ಡಿ) ಪ್ರದೇಶದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಪ್ರಕರಣದ ಆರೋಪಿಗೆ ಮಂಗಳವಾರ ಜಾಮೀನು ಸಿಕ್ಕಿದೆ. ಇದನ್ನು ತಿಳಿದ ಗುಂಪು ರಾತ್ರಿ ಆತನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದೆ ಎಂದು ಬುಧವಾರ ಪ್ರತಿಭಟನೆ ನಡೆಸಲಾಗಿದೆ.

ಆರೋಪಿ ಸಂಗಮೇಶ್ ಎಂಬಾತ ಜಾಮೀನು ಮೇಲೆ ಮಂಗಳವಾರ ಬಿಡುಗಡೆಯಾಗಿದ್ದಾನೆ. ಇದನ್ನು ತಿಳಿದು ಗುಂಪೊಂದು ರಾತ್ರಿ ಅವರ ಮನೆಗೆ ನುಗ್ಗಿ ಹಲ್ಲೆ ಮಾಡಿದೆಯಂತೆ. ಸಂಗಮೇಶ್ ಪತ್ನಿ ಪ್ರಿಯಾಂಕಾ, ಅಣ್ಣನ ಪತ್ನಿ ರಾಜೇಶ್ವರಿ, ತಮ್ಮ ಅನಿಲಕುಮಾರ್, ತಾಯಿ ತಂಗೆಮ್ಮ, ಚಿಕ್ಕಪ್ಪ ಮಹಾದೇವಪ್ಪ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಸಹೋದರ ತಿಳಿಸಿದ್ದಾನೆ.

ಈ ಘಟನೆ ಖಂಡಿಸಿ ಕುಟುಂಬಸ್ಥರು ಹಾಗೂ ಬೆಂಬಲಿಗರು ಕಲಬುರಗಿ-ಜೇವರ್ಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಬರುವ ತನಕ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದಿದ್ದಾರೆ. ಪೊಲೀಸ್ ಕಮಿಷನರ್ ಚೇತನ್.ಆರ್ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ. ಪ್ರತಿಭಟನೆಯಿಂದಾಗಿ ಎರಡು ಕಡೆ ವಾಹನ ದಟ್ಟಣೆ ಉಂಟಾಗಿದೆ.




Leave a Reply

Your email address will not be published. Required fields are marked *

error: Content is protected !!