ರಾಜಭವನ ಹಾಗೂ 5 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ

54

ಪ್ರಜಾಸ್ತ್ರ ಸುದ್ದಿ

ನವದೆಹಲಿ/ಕೊಲ್ಕತ್ತಾ: ದೆಹಲಿಯ ಐದು ಖಾಸಗಿ ಶಾಲೆಗಳಿಗೆ ಹಾಗೂ ಪಶ್ಚಿಮ ಬಂಗಾಳದ ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಟೆರರೂಸರ್ಸ್ ಅನ್ನೋ ಉಗ್ರ ಸಂಘಟನೆ ಗುಂಪಿಗೆ ಸೇರಿದವರು ಎಂದು ಹೇಳಿದ್ದಾರಂತೆ.

ರಾಜಭವನದೊಳಗೆ ಸ್ಫೋಟಕ ವಸ್ತುಗಳನ್ನು ಇಟ್ಟಿದ್ದು, ಹಲವರು ಸಾಯುತ್ತಾರೆ ಎಂದು ಕರೆ ಮಾಡಿದ್ದಾರೆ. ಇನ್ನು ಪೂರ್ವ ದೆಹಲಿಯಲ್ಲಿರುವ ಮದರ್ ಮೇರಿ ಶಾಲೆ ಸೇರಿ 5 ಶಾಲೆಗಳಿಗೂ ಬಾಂಬ್ ಬೆದರಿಕೆ ಕರೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರೀಯ ದಳ, ಅಗ್ನಿಶಾಮಕ ತಂಡ ಸೇರ ರಕ್ಷಣಾ ಪಡೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಲಾಗುತ್ತಿದೆ.

ಜೈಪುರ, ಗೋವಾ, ಕಾನ್ಪುರ್ ವಿಮಾನ ನಿಲ್ದಾಣಗಳಿಗೂ ಬಾಂಬ್ ಬೆದರಿಕೆ ಕರೆಯನ್ನು ಸೋಮವಾರ ಮಾಡಲಾಗಿತ್ತು. ಮುಂಬೈ ಪೊಲೀಸರು ಓರ್ವನನ್ನು ಬಂಧಿಸಿದ್ದರು.




Leave a Reply

Your email address will not be published. Required fields are marked *

error: Content is protected !!