ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಹೇಳಿ ಆತಂಕ ಮೂಡಿಸಿದ್ದ ಯುವಕನನ್ನು ಬಂಧಿಸಲಾಗಿದೆ. ಭಾಸ್ಕರ್ ಬಂಧಿತ ಆರೋಪಿ. ತನಿಖೆ ವೇಳೆ ಈತ, ಬಾಂಬ್ ಇಟ್ಟಿರುವ ಕಾಲ್ ಬಂದಾಗ ಪೊಲೀಸರು ಎಷ್ಟು ಅಲರ್ಟ್ ಆಗಿರುತ್ತಾರೆ ಎನ್ನುವುದನ್ನು ತಿಳಿಯಲು ಹುಸಿ ಬಾಂಬ್ ಕರೆ ಮಾಡಿದ್ದೇನೆ ಎಂದು ಹೇಳಿದ್ದಾನಂತೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿ ವಡ್ಡಹಳ್ಳಿಯವನಾದ ಭಾಸ್ಕರ್ ಬಿಕಾಂ ಪದವೀಧರನಾಗಿದ್ದಾನೆ. ಊರಿನಲ್ಲಿ ಕೃಷಿ ಮಾಡಿಕೊಂಡಿದ್ದಾನೆ. ಬೆಂಗಳೂರಿನಲ್ಲಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಗ್ಗೆ ತಿಳಿದುಕೊಂಡಿದ್ದ ಈತ, ತಾನು ಅದೆ ರೀತಿ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಬೆಂಗಳೂರಿನಿಂದ ಆಂಧ್ರದ ಚಿತ್ತೂರಿನ ದೇವಸ್ಥಾನವೊಂದಕ್ಕೆ ಹೋಗಿದ್ದ. ಹೋಗುವಾಗ ಹೀಗೆ ಎಎನ್ಐ ಸಹಾಯವಾಣಿಗೆ ಕಾಲ್ ಮಾಡಿ ಬಾಂಬ್ ಬೆದರಿಕೆ ಹಾಕಿದ್ದಾನೆ. ಪೊಲೀಸರು ಮೊಬೈಲ್ ನಟ್ ವರ್ಕ್ ಫಾಲೋ ಮಾಡಿದ್ದಾರೆ. ಚಿತ್ತೂರಿನಿಂದ ವಾಪಸ್ ಬರುತ್ತಿದ್ದಾಗ ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.