ಆಪ್ ಪಕ್ಷದಿಂದ ಕೇಜ್ರಿವಾಲ್ ಗಾಗಿ ನಡಿಗೆ

79

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಆರೋಪದಡಿ ಬಂಧನಕ್ಕೆ ಒಳಗಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪರವಾಗಿ, ಇಂದು ಆಪ್ ಪ್ರತಿಭಟನೆ ನಡೆಸಿತು.

ಕೇಜ್ರಿವಾಲ್ ಬೆಂಬಲಿಸಿ ‘ವಾಕ್ ಫಾರ್ ಕೇಜ್ರಿವಾಲ್’ ಹೆಸರಿನ ನಡಿಗೆಯನ್ನು ಭಾನುವಾರ ಮುಂಜಾನೆ ನಡೆಸಲಾಯಿತು. ಲೋಕಸಭಾ ಅಭ್ಯರ್ಥಿಗಳು ಹಾಗೂ ಆಪ್ ಯುವ ಘಟಕದಿಂದ ಇದನ್ನು ಆಯೋಜಿಸಲಾಗಿತ್ತು. ದಕ್ಷಿಣ ದೆಹಲಿಯಿಂದ ನವದೆಹಲಿ ತನಕ ವಾಕ್ ಥಾನ್ ನಡೆಯಿತು ಎಂದು ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಇನ್ನು ಚುನಾವಣೆಯಲ್ಲಿ ಜೈಲ್ ಕಾ ಜವಾಬ್ ವೋಟ್ ಸೆ(ಜೈಲಿಗೆ ಮತದಾನದ ಉತ್ತರ) ಎನ್ನುವ ಅಭಿಯಾನ ಸಹ ನಡೆಸಿದ್ದೇವೆ. ಇದನ್ನು ಎಲ್ಲೆಡೆ ಹೇಳುತ್ತೇವೆ. ಪ್ರಧಾನಿ ಮೋದಿ ಹೇಳಿಕೆಗಳನ್ನು ಗಮನಿಸಿದರೆ ಅವರು ವಿಚಲಿತರಾಗಿರುವುದು ಗೊತ್ತಾಗುತ್ತಿದೆ ಎಂದರು.




Leave a Reply

Your email address will not be published. Required fields are marked *

error: Content is protected !!