ಪ್ರಜಾಸ್ತ್ರ ಸುದ್ದಿ
ವಿಜಯಪುರ: ಕಾಂಗ್ರೆಸ್ ಪಕ್ಷ ಭಾರತವನ್ನು ವೆನೆಜುವೆಲಾ ಮಾಡಲು ಹೊರಟಿದೆ. ಆಮ್ ಆದ್ಮಿ ಪಕ್ಷ ಭಾರತವನ್ನು ಖಾಲಿಸ್ತಾನ್ ಮಾಡಲು ಹೊರಟಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಟಿಎಂಸಿ ಭಾರತರನ್ನು ಬಾಂಗ್ಲಾದೇಶವನ್ನಾಗಿ ಪರಿವರ್ತಿಸಲು ದಾಪುಗಾಲನಿಟ್ಟಿದೆ. ಸಾಮಾಜವಾದಿ ಪಕ್ಷ ಭಾರತವನ್ನು ಪಾಕಿಸ್ತಾನ ಮಾಡಲು ಯತ್ನಿಸುತ್ತಿದೆ. ಇದು ಸುಳ್ಳೋ ನಿಜ ಎಂಬುದಕ್ಕೆ ಈ ಪಕ್ಷಗಳು ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಒಮ್ಮೆ ಓದಿ ನೋಡಿ.
ರಾಷ್ಟ್ರೀಯವಾದ, ಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಸಶಕ್ತ, ಸುಭಿಕ್ಷ, ಸ್ವಾವಲಂಬಿ ಭಾರತದ ಕಲ್ಪನೆ ನಮ್ಮ ಭಾರತೀಯ ಜನತಾ ಪಕ್ಷದ್ದು. ಬಿಜೆಪಿಯ ಪ್ರಣಾಳಿಕೆಯನ್ನು ಒಮ್ಮೆ ಓದಿ ಎಂದು ಪೋಸ್ಟ್ ಮಾಡಿದ್ದಾರೆ.