ಪ್ರವಾಹ ಪರಿಹಾರ: ಮೋದಿ ಪರ ಹೆಚ್ಡಿಕೆ ಬ್ಯಾಟಿಂಗ್

383

ಬೆಂಗಳೂರು: ಪ್ರವಾಹದ ಪರಿಹಾರ ವಿಳಂಬಕ್ಕೆ ಸಂಬಂಧಿಸಿದಂತೆ ಇಡೀ ರಾಜ್ಯದ ಜನ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರತಿಭಟನೆಗಳು ಆಗ್ತಿವೆ. ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಭರ್ಜರಿಯಾಗಿ ವಾಗ್ದಾಳಿ ನಡೆಸ್ತಿದೆ. ಹೀಗಿರುವಾಗ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮೋದಿ ಪರ ಬ್ಯಾಟ್ ಬೀಸಿದ್ದಾರೆ.

ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಪ್ರವಾಹ ಉಂಟಾಗಿತ್ತು. ಆಗ ಪ್ರಧಾನಿ ಮೋದಿ ನನ್ಗೆ ಫೋನ್ ಮಾಡಿದ್ರು. ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ರು. ಈಗಿರುವ ಸಿಎಂ ಹಾಗೂ ಪಿಎಂ ಮೋದಿ ನಡುವೆ ವಿಶ್ವಾಸದ ಕೊರತೆಯಿದೆ ಎಂದು ಹೇಳಿದ್ದಾರೆ.

ಪರಿಹಾರ ವಿಳಂಬವಾಗ್ತಿರುವುದ್ರಿಲ್ಲಿ ನೂರಕ್ಕೆ ನೂರರಷ್ಟು ರಾಜ್ಯ ಸರ್ಕಾರದ ಬೇಜವಾಬ್ದಾರಿತನವಿದೆ. ಕೇಂದ್ರ ಸರ್ಕಾರ ಹಣ ಕೊಡಲಿ ಬಿಡಲಿ. ಇವರು 10 ರಿಂದ 15 ಸಾವಿರ ಕೋಟಿ ಪರಿಹಾರ ನೀಡಬಹುದು. ನಾನು ಇದ್ದಿದ್ರೆ, ಇದನ್ನ ಮಾಡಿ ತೋರಿಸ್ತಿದ್ದೆ ಎಂದು ಹೇಳುವ ಮೂಲಕ, ಪ್ರಧಾನಿ ಮೋದಿ ವಹಿಸಿಕೊಂಡು ಮಾತ್ನಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!