ನವದೆಹಲಿ: ಕಳೆದ ಫೆಬ್ರುವರಿ 27 ರಂದು ಶ್ರೀನಗರದ ಬಳಿ ಎಂಐ17 ವಿ5 ಹೆಲಿಕಾಪ್ಟರ್ ನ್ನ ಹೊಡೆದುರಿಳಿಸಲಾಗಿತ್ತು. ಇದು ನಮ್ಮಿಂದಾದ ದೊಡ್ಡ ತಪ್ಪು ಎಂದು ಏರ್ ಚೀಫ್ ಮಾರ್ಷಲ್ ರಾಕೇಶಕುಮಾರ ಸಿಂಗ್ ಭಾದೌರಿಯಾ ಹೇಳಿದ್ದಾರೆ.
ಬಾಲಕೋಟ್ ದಾಳಿ ಮರುದಿನ ಶ್ರೀನಗರದ ಹತ್ತಿರದ ಬುದ್ಗಾಮ್ ನಲ್ಲಿ ಭಾರತದ್ದೇ ಆದ ಎಂಐ17 ವಿ5 ಹೆಲಿಕಾಪ್ಟರ್ ನ್ನು ಹೊಡೆದುರುಳಿಸಲಾಗಿತ್ತು. ಈ ವೇಳೆ ಆರು ಜನ ಐಎಎಫ್ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ರು. ಈ ಬಗ್ಗೆ ಆಡಳಿತಾತ್ಮಕ ತನಿಖೆ ನಡೆದು ಶಿಕ್ಷೆಯಾಗಿದೆ. ಇದು ನಮ್ಮ ಕಡೆಯಿಂದ ಆದ ದೊಡ್ಡ ತಪ್ಪು. ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಏರ್ ಚೀಫ್ ಮಾರ್ಷಲ್ ರಾಕೇಶಕುಮಾರ ಹೇಳಿದ್ದಾರೆ.