ಪ್ರಜಾಸ್ತ್ರ ಸುದ್ದಿ
ಕಲಬುರಗಿ: ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆಗೆ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿರುವ ಜೆಡಿಎಸ್, ಇದರ ಪ್ರಯುಕ್ತ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. 2 ವಿಧಾನಸಭೆ, 1 ಲೋಕಸಭೆ ಉಪ ಚುನಾವಣೆಯಲ್ಲಿ ಬಸಕಲ್ಯಾಣದಲ್ಲಿ ಮಾತ್ರ ಅಭ್ಯರ್ಥಿ ನಿಲ್ಲಿಸಿದ್ದು ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ.
ಬಿಜೆಪಿಯ ಸಂಭಾವ್ಯ ಅಭ್ಯರ್ಥಿಯೊಬ್ಬರು ಹೈಕಮಾಂಡ್ ಗೆ ದೊಡ್ಡ ಮೊತ್ತದ ಹಣ ನೀಡಿದ್ದಾರೆ ಅನ್ನೋ ಆರೋಪವನ್ನು ಮಾಡಿದರು. ಇನ್ನು ಸದನದಲ್ಲಿ ಜನರ ಸಮಸ್ಯೆಗಳು, ರೈತರ ಕಷ್ಟಗಳು ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸುವುದು ಬಿಟ್ಟು, ಸಿಡಿ ವಿಚಾರ, ಸಿದ್ದರಾಮಯ್ಯ ಎಷ್ಟು ಪಂಚೆ ತಗೊಂಡರು, ಕಲರ್ ಯಾವುದು ಅನ್ನೋ ಚರ್ಚೆ ನಡೆಸಿದ್ದು ವಿಷಾದಕರ ಎಂದರು.