ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗಲಾಟೆ ನಡೆಯುತ್ತಿದೆ. ಇದರ ನಡುವೆ ಸಿಡಿ ಲೇಡಿ ಎಂದೆ ಹೇಳಲಾಗ್ತಿರುವ ಯುವತಿ ಮತ್ತೊಂದು ವಿಡಿಯೋ ಬಿಟ್ಟಿದ್ದು, ತಂದೆ ತಾಯಿಗೆ ರಕ್ಷಣೆ ಕೊಡಬೇಕು ಎಂದಿದ್ದಾಳೆ.
ನನ್ನ ತಂದೆ ತಾಯಿಗೆ ರಕ್ಷಣೆ ನೀಡಿರುವುದು ಖಚಿತವಾದ್ರೆ ಮರುದಿನವೇ ಎಸ್ಐಟಿ ಮುಂದೆ ಹಾಜರಾಗುತ್ತೇನೆ ಎಂದಿದ್ದಾಳೆ. ಮಾರ್ಚ್ 12ರಂದು ಕಮಿಷನರ್ ಆಫೀಸ್ ಗೆ ವಿಡಿಯೊಂದು ಕಳಿಸಿದ್ದೆ. ಮಾರ್ಚ್ 13ರಂದು ರಮೇಶ ಜಾರಕಿಹೊಳಿ ದೂರು ನೀಡಿದ್ದಾರೆ. ಅದಾದ ಅರ್ಧ ಗಂಟೆಯಲ್ಲಿ ನನ್ನ ವಿಡಿಯೋ ಬಿಡಲಾಗಿದೆ ಎಂದಿದ್ದಾಳೆ. ಎಸ್ಐಟಿ ಯಾರು ಯಾರ ಪರ ಕೆಲಸ ಮಾಡ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾಳೆ.
ಇನ್ನು ಮಹಿಳಾ ಸಂಘಟನೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ, ಗೃಹ ಸಚಿವ ಬೊಮ್ಮಾಯಿ ಅವರಿಗೆ ಮನವಿ ಮಾಡಿಕೊಳ್ಳುವ ತಂದೆ ತಾಯಿಗೆ ರಕ್ಷಣೆ ನೀಡಬೇಕು ಎಂದಿದ್ದಾಳೆ.