ಪ್ರಜಾಸ್ತ್ರ ಸುದ್ದಿ
ಲಖಾನಿ: ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಗೆ ಶಹಝಾದಾ(ರಾಜಕುಮಾರ) ಎಂದು ಪ್ರಧಾನಿ ಮೋದಿ ಲೇವಡಿ ಮಾಡಿರುವುದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಅರಮನೆಯಲ್ಲಿರುವ ಶೆಹನ್ ಶಾ(ಚಕ್ರವರ್ತಿ) ಸಾರ್ವಜನಿಕರಿಂದ ದೂರವಾಗಿದ್ದಾರೆ ಎಂದು ತಿರುಗೇಟು ನೀಡಿದರು.
ಗುಜರಾತಿನ ಬನಸ್ಕಾಂತಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆನಿಬೆನ್ ಠಾಕೂರ್ ಪರ ಇಂದು ಪ್ರಚಾರ ನಡೆಸಿದರು. ಶೆಹಝಾದಾ ಕನ್ಯಾಕುಮಾರಿಯಿಂದ ಕಾಶ್ಮೀರ ತನಕ 4 ಸಾವಿರ ಕಿಲೋ ಮೀಟರ್ ಪಾದಯಾತ್ರೆ ಮಾಡಿ ಜನರ ಕಷ್ಟ ಕೇಳಿದ್ದಾರೆ. ಅಧಿಕಾರಕ್ಕಾಗಿ ಗುಜರಾತ್ ಜನರನ್ನು ಬಳಸಿಕೊಂಡ ಶೆಹನ್ ಶಾ ಅವರನ್ನು ಮರತೆ ಬಿಟ್ಟಿದ್ದಾರೆ ಎಂದರು.
ಶೆಹನ್ ಶಾ ಅರಮನೆಯಲ್ಲಿ ವಾಸಿಸುತ್ತಾರೆ. ಅವರ ಬಟ್ಟೆ ಮೇಲೆ ಸ್ವಲ್ಪವಾದರು ಧೂಳು ಕುಳಿತಿರುವುದು ಕಂಡಿದ್ದೀರಾ? ಅವರ ನಿಮ್ಮ ಕಷ್ಟದ ಜೀವನ, ಕೃಷಿಕರ, ಕಾರ್ಮಿಕರ ಸಮಸ್ಯೆ, ಹಣದುಬ್ಬರದಿಂದ ನರಳುತ್ತಿರುವ ಜನರ ನೋವು ಅವರಿಗೆ ಹೇಗೆ ಅರ್ಥವಾದೀತು? ಇವರು ಸಂವಿಧಾನ ಬದಲಿಸುವ ಮಾತು ಆಡುತ್ತಾರೆ. ಹಾಗಾದರೆ, ನಮ್ಮ ಹಕ್ಕುಗಳನ್ನು ಕಸಿಯುವ ಯತ್ನವಾಗುತ್ತದೆ ಎಂದು ಆಕ್ರೋಶ ಹೊರ ಹಾಕಿದರು.