ಬ್ರೇಕಿಂಗ್ ನ್ಯೂಸ್: ಖ್ಯಾತ ಹಿರಿಯ ವಿಮರ್ಶಕ ಜಿ.ಎಸ್ ಆಮೂರ ಅಸ್ತಂಗತ

384

ಪ್ರಜಾಸ್ತ್ರ ಸುದ್ದಿ

ಧಾರವಾಡ: ಕನ್ನಡದ ಖ್ಯಾತ ಹಿರಿಯ ವಿಮರ್ಶಕ ಜಿ.ಎಸ್ ಆಮೂರ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. 95 ವರ್ಷದ ಜಿ.ಎಸ್ ಆಮೂರ ತಮ್ಮ ನಿವಾಸದಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ನೃಪತುಂಗ ಪ್ರಶಸ್ತಿ ಘೋಷಿಸಲಾಗಿದೆ.

ಡಾ.ಜಿ.ಎಸ್ ಆಮೂರ ಅವರು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನ ಪಡೆದಿದ್ದಾರೆ. ಕಳೆದ 5 ದಶಕಗಳಿಂದ ಕನ್ನಡ ಹಾಗೂ ಇಂಗ್ಲಿಷ್ ಕೃತಿಗಳನ್ನ ವಿಮರ್ಶೆ ಮಾಡುತ್ತಾ, ಕನ್ನಡ ಸಾಹಿತ್ಯ ಲೋಕದಲ್ಲಿ ಬಹುದೊಡ್ಡ ಹೆಸರು ಮಾಡಿದ್ರು.

ಜಿ.ಎಸ್ ಆಮೂರ ನಿಧನಕ್ಕೆ ನಾಡಿನ ಸಾಹಿತಿಗಳು, ಗಣ್ಯರು, ಅವರ ಅಭಿಮಾನಿಗಳು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!