ಸಿಂದಗಿ: ವರುಣನ ಅಬ್ಬರದಿಂದ ಅಕ್ಷರಶಃ ನಡುಗಡ್ಡೆಯಾಗಿರುವ ಉತ್ತರ ಕರ್ನಾಟಕ ಭಾಗದ ನಿರಾಶ್ರಿತರಿಗಾಗಿ ನೆರವು ನೀಡಲು ಸಾರ್ವಜನಿಕರ ಬಳಿ ಪ್ರಜಾಸ್ತ್ರ ಮನವಿ ಮಾಡಿಕೊಂಡಿದೆ. ನಮ್ಮ ಈ ಮನವಿಗೆ ಸ್ಪಂದಿಸ್ತಿರುವ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಜನತೆ ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ.
ದಿನಸಿ ವಸ್ತುಗಳು, ಕಿರಾಣಿ ವಸ್ತುಗಳು, ಬೇಸಿಕ್ ಮೆಡಿಸಿನ್ಸ್, ಬಟ್ಟೆಗಳು, ಊಟದ ತಟ್ಟೆಗಳು ಸೇರಿದಂತೆ ಹಲವಾರು ಅಗತ್ಯದ ವಸ್ತುಗಳನ್ನ ನೀಡ್ತಿದ್ದಾರೆ.
ಪ್ರಜಾಸ್ತ್ರದ ಪರವಾಗಿ ಸ್ನೇಹಿತರ ತಂಡವನ್ನ ಮಾಡಿಕೊಂಡು ದಾನಿಗಳಿಂದ ಅಗತ್ಯವಾದ ವಸ್ತುಗಳನ್ನ ಪಡೆದುಕೊಂಡು ಬರ್ತಿದ್ದಾರೆ. ಸ್ವಇಚ್ಛೆಯಿಂದ ನಿರಾಶ್ರಿತರಿಗಾಗಿ ಮಿಡಿಯುವ ಮನಸ್ಸುಗಳಿಗೆ ಕೋಟಿ ಕೋಟಿ ನಮಸ್ಕಾರಗಳು.
ಇನ್ನು ನಮ್ಮ ಈ ಕಾರ್ಯಕ್ಕೆ ನಿಮಗಾಗಿ ಟೆಕ್ನಾಲಜಿ ಮತ್ತು ಸಾಫ್ಟ್ ಸೊಲಿನ್ ಇನೊವೆಷೇನ್ ಸಂಸ್ಥೆ ಸಹ ಕೈಜೋಡಿಸಿದೆ. ಆ ಸಂಸ್ಥೆಯ ಸಿಬ್ಬಂದಿ, ಗೆಳೆಯರ ಬಳಗ ಸೇರಿಕೊಂಡು ಅಗತ್ಯ ವಸ್ತುಗಳನ್ನ ಸಂಗ್ರಹಿಸುವ ಕೆಲಸ ಮಾಡ್ತಿದೆ.
ಒಂದೊಳ್ಳೆ ಕಾರ್ಯಕ್ಕೆ ಹೀಗೆ ತೊಡಗಿಸಿಕೊಳ್ಳುವ ಮಾನವೀಯ ಗುಣಗಳನ್ನ ಹೊಂದಿರುವ ಹೃದಯಗಳ ಸಂಖ್ಯೆ ಹೆಚ್ಚಾಗ್ಲಿ ಅನ್ನೋದು ನಮ್ಮ ಆಶಯ.