ಪ್ರಜಾಸ್ತ್ರ ಸುದ್ದಿ
ವಾರಣಾಸಿ: ಪ್ರಧಾನಿ ಮೋದಿ ಮೇ 14ರಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ನಗರ ಅಧ್ಯಕ್ಷ ವಿದ್ಯಾಸಾಗರ ರೈ ಭಾನುವಾರ ತಿಳಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಒಂದು ದಿನ ಮೊದಲು ರೋಡ್ ಶೋ ನಡೆಸಲಿದ್ದಾರೆ.
ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರಾಯ್, ಬಿಎಸ್ಪಿಯಿಂದ ಅತ್ತರ್ ಜಮಲ್ ಲಾರಿ ಕಣದಲ್ಲಿದ್ದು, ಜೂನ್ 1ರಂದು ಮತದಾನ ನಡೆಯಲಿದೆ. ಕಳೆದ ಬಾರಿ ಎಸ್ಪಿ ಅಭ್ಯರ್ಥಿ ಶಾಲಿನಿ ಯಾದವ್ 2ನೇ ಸ್ಥಾನದಲ್ಲಿ ಕಾಂಗ್ರೆಸ್ಸಿನ ಅಜಯ್ ರಾಯ್ 3ನೇ ಸ್ಥಾನದಲ್ಲಿದ್ದರು.