ಪ್ರಜಾಸ್ತ್ರ ಸುದ್ದಿ
ಭುವನೇಶ್ವರ್: ಚುನಾವಣೆ ಪ್ರಚಾರಕ್ಕೆ ಪಕ್ಷದಿಂದ ಫಂಡ್ ಬರುತ್ತಿಲ್ಲ. ಇದರಿಂದ ಸ್ಪರ್ಧಿಸಲು ಕಷ್ಟವಾಗುತ್ತಿದೆ ಎಂದು ಹೇಳಿ ಟಿಕೆಟ್ ವಾಪಸ್ ಮಾಡಿದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸುಚರಿತಾ ಮೊಹಂತಿ ಜಾಗಕ್ಕೆ ಜಯನಾರಾಯಣ್ ಪಟ್ನಾಯಕ್ ಬಂದಿದ್ದಾರೆ.
ಜಯನಾರಾಯಣ್ ಪಟ್ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಆದೇಶದ ಮೇರೆಗೆ ಪಟ್ನಾಯಕ್ ಅಭ್ಯರ್ಥಿಯಾಗಿದ್ದಾರೆ.