ಯತ್ನಾಳ ಮಾಲೀಕತ್ವದ ಕಾರ್ಖಾನೆ ಮುಚ್ಚಲು ನಿರ್ದೇಶನ

150

ಪ್ರಜಾಸ್ತ್ರ ಸುದ್ದಿ

ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಡೆತನಕ್ಕೆ ಸೇರಿರುವ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ. ಹಿನ್ನಲೆಯಲ್ಲಿ ಇಂದು ಸೇಡಂ ಎಸಿ ಆಶಪ್ಪ ಪೂಜಾರಿ ಭೇಟಿ ನೀಡಿ, ಕಾರ್ಖಾನೆ ಮುಚ್ಚುವಂತೆ ನಿರ್ದೇಶನ ನೀಡಿದರು.

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ರೀತಿ ಹೇಳಿದರು. ಕಂಪನಿಗೆ ಹಂಚಿಕೆಯಾದ ಗ್ರಾಮಗಳ ಕಬ್ಬಿನ ಜೊತೆಗೆ ಇತರೆ ಕಂಪನಿಗೆ ಹಂಚಿಕೆಯಾದ ಗ್ರಾಮಗಳಿಂದಲೂ ಕಬ್ಬು ಪಡೆಯಲಾಗುತ್ತಿದೆ ಎನ್ನುವ ದೂರುಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದರು. ಕಂಪನಿಗೆ ಹಂಚಿಕೆಯಾದ ಗ್ರಾಮಗಳ ವಿವರ, ಇದುವರೆಗೂ ನುರಿಸಿದ ಕಬ್ಬು, ಬಳಕೆಯಾದ ನೀರಿಗೆ ಪಡೆದ ಅನುಮತಿ, ಸ್ಥಳೀಯ ಸಂಸ್ಥೆಗೆ ತೆರಿಗೆ ಕಟ್ಟದೆ ಇರುವುದು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಯಾಕೆ ಪಡೆದಿಲ್ಲ, ಎಫ್ ಆರ್ ಪಿ ಯಾಕೆ ಪಡೆದಿಲ್ಲ ಎಂದು ಕೇಳಲಾಯಿತು.




Leave a Reply

Your email address will not be published. Required fields are marked *

error: Content is protected !!