ಪ್ರಜಾಸ್ತ್ರ ಸುದ್ದಿ
ನರಗುಂದ: ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯ ಮತದಾನ ಜಾಗೃತಿಗಾಗಿ ಸ್ವೀಪ್ ಸಮಿತಿ ಸೇರಿದಂತೆ ವಿವಿಧ ಇಲಾಖೆಗಳು ತರಹೇವಾರಿ ಕಾರ್ಯಕ್ರಮ ಆಯೋಜನೆ ಮಾಡುತ್ತಿವೆ. ಇದೇ ರೀತಿ 2 ತಿಂಗಳ ಮಗುವಿನ ಬೇಬಿ ಫೋಟೋಶೂಟ್ ಮೂಲಕ ಮತದಾನ ಜಾಗೃತಿ ಮೂಡಿಸಲಾಗಿದೆ.
ನರಗುಂದ ಪಟ್ಟಣದ ಸುರೇಶ ಹಾಗೂ ಶಿಲ್ಪಾ ಬಾಳಿಕಾಯಿ ದಂಪತಿ ತಮ್ಮ ಎರಡನೇ ಮಗು ಪ್ರಣಮ್ಯಳ ಫೋಟೋಶೂಟ್ ವೇಳೆ ಮತದಾನ ಜಾಗೃತಿ ಮೂಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಮ, ಕೃಷ್ಣ, ಹನುಮ ಜಯಂತಿಯ ಸಂದರ್ಭದಲ್ಲಿ ಮಕ್ಕಳಿಗೆ ಅವರ ವೇಷ ಹಾಕಿ ಫೋಟೋಶೂಟ್ ಮಾಡುತ್ತಿರುವುದು ಕಂಡು ಬರುತ್ತಿದೆ. ಇದೇ ರೀತಿ ಮತದಾನ ಜಾಗೃತಿ ಕುರಿತು ಫೋಟೋಶೂಟ್ ಮಾಡಲಾಗಿದೆ. ಇಳಕಲ್ ಸೀರೆಯ ಮೇಲೆ ಸುತ್ತ ಹೂವಿನಿಂದ ಅಲಂಕಾರ ಮಾಡಿ, ಅಕ್ಕಿಯಿಂದ ನನ್ನ ಮತ ನನ್ನ ಹಕ್ಕು. ಮೇ 7, ಮತ ಹಾಕಿ ಎಂದು ಬರೆದು ಅಭ್ಯರ್ಥಿಗಳ ಹೆಸರು ಇರುವ ಪೇಪರ್ ಇಟ್ಟು ಪ್ರಣಮ್ಯಳ ಫೋಟೋಶೂಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.