ಪ್ರಜಾಸ್ತ್ರ ಸುದ್ದಿ
ಅಯೋಧ್ಯೆ: ಬಿಹಾರದಿಂದ ಉತ್ತರ ಪ್ರದೇಶದಲ್ಲಿ ಬರೋಬ್ಬರಿ 95 ಮಕ್ಕಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಮಕ್ಕಳ ಕಲ್ಯಾಣ ಆಯೋಗದ ಸದಸ್ಯೆ ಸುಚಿತ್ರಾ ಚತುರ್ವೇದಿ ನೀಡಿದ ಮಾಹಿತಿ ಆಧಾರದ ಮೇಲೆ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅಯೋಧ್ಯೆದ ಮಕ್ಕಳ ಆಯೋಗದ ಅಧ್ಯಕ್ಷ ಸರವೇಶ್ ಅವಸ್ತಿ ತಿಳಿಸಿದ್ದಾರೆ.
ಶುಕ್ರವಾರ ಮುಂಜಾನೆ ಈ ಬಗ್ಗೆ ಮಾಹಿತಿ ಬಂದಿದೆ. ಬಿಹಾರದಿಂದ ಉತ್ತರ ಪ್ರದೇಶದ ಶಹರಾನಪುರಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. 4 ರಿಂದ 12 ವರ್ಷದ ಮಕ್ಕಳಿದ್ದು, ಅವರನ್ನು ರಕ್ಷಿಸಿ ಆರೋಗ್ಯ ತಪಾಸಣೆ ನಡೆಸಿ ಊಟ ವ್ಯವಸ್ಥೆ ಮಾಡಲಾಗಿದೆ.
ಈ ಹಿಂದೆ ಬಿಹಾರದಿಂದ ಮಕ್ಕಳನ್ನು ಅಕ್ರಮವಾಗಿ ಕರೆದುಕೊಂಡು ಬಂದು ರಾಜ್ಯದ ವಿವಿಧ ಮದರಸಗಳಿಗೆ ಸಾಗಾಟ ಮಾಡಲಾಗಿದ್ದು, ಅವರನ್ನು ರಕ್ಷಿಸಲಾಗಿದೆ ಎಂದು ಘೋರಕಪರದ ಮಕ್ಕಳ ಕಲ್ಯಾಣ ಆಯೋಗ ತಿಳಿಸಿದೆ. ಮಕ್ಕಳ ಅಪಹರಣ, ಕಳ್ಳಸಾಗಾಣಿಕೆಯಲ್ಲಿ ಬಿಹಾರ, ಉತ್ತರ ಪ್ರದೇಶ, ಆಂಧ್ರ ಮುಂಚೂಣಿಯಲ್ಲಿದ್ದು, ಪೋಷಕರನ್ನು ಆತಂಕ ಮೂಡಿದೆ.