ಪ್ರಜಾಸ್ತ್ರ ಸುದ್ದಿ
ವಿಜಯಪುರ: ಲೋಕಸಭಾ ಚುನಾವಣೆಯ ಕರ್ನಾಟಕದಲ್ಲಿನ ಮೊದಲ ಹಂತದ ಮತದಾನ ಶುಕ್ರವಾರ ಮುಗಿದಿದೆ. ಈಗ 2ನೇ ಹಂತದ ಮತದಾನ ಉಳಿದಿದ್ದು, ಉತ್ತರ ಕರ್ನಾಟಕ, ಕಲ್ಯಾಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೇ 7ರಂದು ಮತದಾನ ನಡೆಯಲಿದೆ.
85 ವರ್ಷ ಮೇಲ್ಪಟ್ಟವರಿಗೆ, ವಿಕಲ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಮಾಡಿದ್ದು, ಜಿಲ್ಲೆಯ ಬಬಲೇಶ್ವರ ತಾಲೂಕಿನ ದದಾಮಟ್ಟಿ ಗ್ರಾಮದಲ್ಲಿ 90 ವರ್ಷದ ಯಲ್ಲವ್ವ ಮಾದರ ಎನ್ನುವ ವೃದ್ಧೆ ಮನೆಯಿಂದಲೇ ಮತದಾನ ಮಾಡಿದರು.
ಈ ವೇಳೆ ಮಾತನಾಡಿದ ಅಜ್ಜಿ, ನಮಗೆ ಮೊದಲ ವೋಟ್ ಹಾಕಕ್ಕ ಹೊತ್ಕೊಂಡು ಹೋಗ್ತಿದ್ದರು. ಈಗ ಮನಿಯಿಂದ ಹಾಕಕ್ಕ ಮನಿಗ ಬಂದಾರ. ಸರ್ಕಾರಕ್ಕೆ ಪುಣ್ಯ ಬರ್ಲಿ ಅಂತಾ ಹೇಳಿದರು.