ಪ್ರಜಾಸ್ತ್ರ ಸುದ್ದಿ
ಪಾಟ್ನಾ: ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಪಶುಪತಿ ಪರಾಸ್ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಎನ್ ಡಿಎ ಮೈತ್ರಿಕೂಟದಿಂದ ಹೊರ ಬಂದಿದ್ದಾರೆ.
ಬಿಜೆಪಿ ಎಲ್ ಜೆಪಿ(ರಾಮ ವಿಲಾಸ್ ಬಣ) ಮುಖ್ಯಸ್ಥ ಚಿರಾಗ್ ಪಾಸ್ವಾನನೊಂದಿಗೆ ಮೈತ್ರಿ ಮಾಡಿಕೊಂಡ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಎಲ್ ಜೆಪಿಯಲ್ಲಿ ಎರಡು ಬಣಗಳಿದ್ದು, ದಿವಂಗತ ರಾಮ್ ವಿಲಾಸ್ ಪುತ್ರ ಚಿರಾಗ್ ಹಾಗೂ ಸಹೋದರ ಪಶುಪತಿ ಬಣವಿದೆ.
ಬಿಜೆಪಿ 17, ಜೆಡಿಯು 16, ಚಿರಾಗ್ ಬಣದ ಎಲ್ ಜೆಪಿ 5 ಕಡೆ, ಹಿಂದೂಸ್ತಾನಿ ಅವಾಮ್ ಮೋರ್ಚಾ, ರಾಷ್ಟ್ರೀಯ ಲೋಕ ಮೋರ್ಹಾ ತಲಾ ಒಂದು ಕಡೆ ಸ್ಪರ್ಧಿಸಲಿವೆ ಎಂದು ಬಿಜೆಪಿ ಚುನಾವಣೆ ಉಸ್ತುವಾರಿ ವಿನೋದ್ ತಾವ್ಡೆ ಹೇಳಿದ್ದಾರೆ. ಈ ಬೆಳವಣಿಗೆಯಿಂದ ಪಶುಪತಿ ಪರಾಸ್ ಎನ್ ಡಿಎಯಿಂದ ಹೊರ ಬಂದಿದ್ದಾರೆ.