ಪ್ರಜಾಸ್ತ್ರ ಸುದ್ದಿ
ಕೊಡಗು: ಕಾಫೀ ನಾಡಿನ ವಿವಿಧ ತಾಲೂಕುಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಹೀಗಾಗಿ ಮತ್ತೆ ಪ್ರವಾಹ ಎದುರಾಗುವ ಭೀತಿ ಶುರುವಾಗಿದೆ. ಎರಡು ವರ್ಷಗಳ ಹಿಂದೆ ಕಾಣಿಸಿಕೊಂಡು ಸ್ಥಿತಿ ಮತ್ತೆ ಪುನಾರಾವರ್ತನೆಯಾಗುವ ಲಕ್ಷಣಗಳು ಕಾಣಿಸುತ್ತಿವೆ.
ಭಾಗಮಂಡಲದ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದೆ. ಕಾವೇರಿ ನದಿ ಕುಡಿಗೆ ಬಳಿ ಅಪಾಯದ ಮಟ್ಟ ಮೀರಿದೆ. ಇತ್ತ ಹಾಸನ ಜಿಲ್ಲೆಯ ಹೇಮಾವತಿ ನದಿ ಸಹ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ. ಇದ್ರಿಂದಾಗಿ ಕೊಡಗಿನಲ್ಲಿ ಪ್ರವಾಹ ಮತ್ತು ಭೂಕುಸಿತ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದ್ದು, ಎಚ್ಚರಿಕೆ ನೀಡಲಾಗಿದೆ.
ಚಿಕ್ಕಮಗಳೂರಿನಲ್ಲಿ ಭಾರಿ ಮಳೆಯಾಗ್ತಿದ್ದು ಮೂಡಿಗೆರೆ-ಮಂಗಳೂರು ರಸ್ತೆ ಬಂದ್ ಆಗಿದೆ. ಅಲ್ದೇ, ಒಬ್ಬರು ಸಾವನ್ನಪ್ಪಿದ್ದಾರೆ. ಮಲೆನಾಡು, ಕರಾವಳಿಯಲ್ಲಿ ಸಹ ಮಳೆಯ ಆರ್ಭಟ ಜೋರಾಗಿದೆ. ಮೈಸೂರಿನಲ್ಲಿ ಮಳೆಯಿಂದಾಗಿ 4 ಮನೆಗಳು ಕುಸಿದಿವೆ. ಕರೋನಾ ಲಾಕ್ ಡೌನ್ ನಿಂದ ಈಗಾಗ್ಲೇ ಬದುಕು ಹಳಿ ತಪ್ಪಿದೆ. ಈಗ ಪ್ರವಾಹ ಉಂಟಾದ್ರೆ ಜೀವನ ಅನ್ನೋದು ನಿಜಕ್ಕೂ ದುರಂತಮಯವಾಗಿರಲಿದೆ.