ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ಪ್ರಧಾನಿ ಮೋದಿ, ಬುಧವಾರ ಭೂಮಿಪೂಜೆ ಕಾರ್ಯಕ್ರಮ ನೆರವೇರಿಸಿದ್ದಾರೆ. ಇದಕ್ಕೂ ಮೊದ್ಲು ಸಂಸದೆ ಶೋಭಾ ಕರಂದ್ಲಾಜೆ ಅವರು ಮಾಡಿದ ಟ್ವೀಟ್ ಇದೀಗ ಚರ್ಚೆಗೆ ಗ್ರಾಸವಾಗಿದೆ.
ರಾಜನನ್ನ ಮರಳಿ ಮನೆಗೆ ಸ್ವಾಗತಿಸಲು ಅಯೋಧ್ಯೆ ಎಲ್ಲ ರೀತಿಯಿಂದ ಸಜ್ಜಾಗಿದೆ ಅನ್ನೋ ಸಾಲುಗಳನ್ನ ಬರೆದು ಫೋಟೋವೊಂದನ್ನ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ರಾಮನನ್ನ ಬಾಲಕನನ್ನಾಗಿ ಮೋದಿಯನ್ನ ದೊಡ್ಡವನನ್ನಾಗಿ ತೋರಿಸಲಾಗಿದೆ. ಹೀಗಾಗಿ ಅನೇಕರು ರಾಮನಿಗಿಂತ ಮೋದಿ ದೊಡ್ಡವರೇ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ತೀಕ್ಷಣವಾಗಿ ತೀವಿದಿದ್ದಾರೆ. ಪ್ರೀತಿಯನ್ನು ಕಲಿಯುವುದಿಲ್ಲ. ಕಲಿಯಲಾಗುವುದಿಲ್ಲ. ಸಹನಾಭೂತಿಯನ್ನೂ ಕಲಿತಿಲ್ಲ. ಪ್ರೀತಿಯನ್ನು ಕಲಿತಿಲ್ಲ. ನಿಮಗೆ ರಾಮನಿಗಿಂತ ನಿಮ್ಮನ್ನು ದೊಡ್ಡವರನ್ನಾಗಿ ತೋರಿಸುವುದರೊಂದಿಗೆ ನೀವು ಸಂತೋಷವಾಗಿರುತ್ತೀರಿ. ಶ್ರೀರಾಮ ಚರಿತೆಯಿಂದ ಮನಸ್ಸು ಏನುನ್ನು ಕಲಿಯುತ್ತದೆ ಎಂದು ಕೇಳಿದ್ದಾರೆ.