ಪ್ರಜಾಸ್ತ್ರ ಕ್ರೀಡಾ ಸುದ್ದಿ
ವಿಜಯನಗರ: ಇಂದು ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ 40ನೇ ಹುಟ್ಟು ಹಬ್ಬ. ಹೀಗಾಗಿ ಕ್ರೀಡಾ ಕ್ಷೇತ್ರದ ದಿಗ್ಗಜರು ಸೇರಿದಂತೆ ಇತರೆ ಕ್ಷೇತ್ರದ ಸಾಧಕರು ಹಾಗೂ ಅವರ ಅಸಂಖ್ಯಾತ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
ಮಹಿಗೆ ಅವರ ಅಭಿಮಾನಿಗಳು ಏನು ಬೇಕಾದ್ರು ಮಾಡಲು ರೆಡಿಯಿದ್ದಾರೆ. ಇಂದು ಧೋನಿ ಹುಟ್ಟು ಹಬ್ಬಕ್ಕೆ ವಿಜಯನಗರ ಜಿಲ್ಲೆಯ ಕೂಡ್ಲಗಿಯ ವೆಂಕಟೇಶ ಅನ್ನೋ ಅಭಿಮಾನಿ ಕೈ ಮೇಲೆ ದೋನಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ರಾಯಚೂರಿನ ಸಿಂಧನೂರ ಮೂಲದ ಟ್ಯಾಟೂ ಕಲಾವಿದ ಶಂಕರ ಬದಿ ಎಂಬುವರು ಧೋನಿ ಚಿತ್ರ ಬಿಡಿಸಿದ್ದಾರೆ.
ಬರೀ ಕೇಕ್ ಕಟ್ ಮಾಡಿದ್ರೆ ಧೋನಿ ಹುಟ್ಟು ಹಬ್ಬ ಮುಗಿಯುವುದಿಲ್ಲ. ಕೊನೆತನಕ ಧೋನಿ ಜೊತೆಯಲ್ಲಿರಬೇಕು ಅನ್ನೋ ಕಾರಣಕ್ಕೆ ತಮ್ಮ ಬಲಗೈ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವುದಾಗಿ ವೆಂಕಟೇಶ ಹೇಳಿದ್ದಾರೆ.