ನಾಗಮಂಗಲ: ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತಟ್ಟಹಳ್ಳಿ ಗ್ರಾಮದಲ್ಲಿ ರೇಷನ್ ಇದು ವಿತರಣೆ ಮಾಡಲಾಯಿತು. ಮಂಡ್ಯ ಸಂಸದೆ ಸುಮಲತಾ ಅಂಬರೀಶ ಹಾಗೂ ಮಂಡ್ಯ ಜಿಲ್ಲೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಆರ್. ರಾಮಚಂದ್ರ ಮತ್ತು ಮುಂತಾದವರು ಸೇರಿ ರೇಷನ್ ವಿತರಣೆ ಮಾಡಿದ್ರು.
ಕೋವಿಡ್ 19 ವೈರಸ್ ಸಂಕ್ರಾಮಿಕವಾಗಿ ಜಗತ್ತಿನ ಎಲ್ಲೆಡೆ ಆವರಿಸಿ ಧರ್ಮ, ಜಾತಿ ಎನ್ನದೇ ಮನುಷ್ಯ ಕುಲಕ್ಕೆ ಕಂಟಕವಾಗಿದೆ. ಅಸಂಖ್ಯಾತ ಜನರು ರೋಗದ ನೋವಿನಿಂದ ನರಳುತ್ತಿದಾರೆ. ಇದರಿಂದ ಕೋಟ್ಯಾಂತರ ಜನರಿಗೆ ಉದ್ಯೊಗ ಕಳೆದುಕೊಂಡು ಜೀವನ ನಡೆಸೋದು ಕಷ್ಟವಾಗಿದೆ. ಇವರಿಗೆ ಸಂಸದೆ ಸುಮಲತಾ ಹಾಗೂ ಮನ್ ಮುಲ್ ಸಂಘದಿಂದ ಪಡಿತರ ವಿತರಣೆ ಮಾಡಲಾಗಿದೆ.