ಪ್ರಜಾಸ್ತ್ರ ಸುದ್ದಿ
ನಾಗಮಂಗಲ: ತೀವ್ರ ಕುತೂಹಲ ಕೆರಳಿಸಿದ್ದ ನಾಗಮಂಗಲ ತಾಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡರ ಮೇಲಿನ ಅವಿಶ್ವಾಸ ನಿಲುವಳಿ ಸೂಚನೆಯನ್ನ ವಾಪಸ್ ಪಡೆಯಲಾಗಿದೆ. ಜಿಲ್ಲಾಧಿಕಾರಿ ಎದುರು ಸದಸ್ಯರೇ ಹಾಜರಾಗಿ ಅವಿಶ್ವಾಸ ನಿಲುವಳಿಯನ್ನ ವಾಪಸ್ ಪಡೆದಿದ್ದಾರೆ.
ಅವಿಶ್ವಾಸ ನಿಲುವಳಿ ವಾಪಸ್ ಪಡೆದಿದ್ರಿಂದ, ಸಹಕಾರ ಸಂಘದ ಚುನಾವಣೆಯಲ್ಲಿ ಗೆದ್ದು ಬೀಗುತ್ತಿದ್ದ ಮಾಜಿ ಶಾಸಕ ಚೆಲುವರಾಯಸ್ವಾಮಿ ಬೆಂಬಲಿಗರು ತೀವ್ರ ಮುಖಭಂಗಕ್ಕೀಡಾಗಿದ್ದಾರೆ. ಕಳೆದ ತಿಂಗಳು ಮಾಜಿ ಅಧ್ಯಕ್ಷ ಕೃಷ್ಣೇಗೌಡರ ಮುಂದಾಳತ್ವದಲ್ಲಿ ದಾಸೇಗೌಡರ ವಿರುದ್ದ 12 ಜನ ಸದಸ್ಯರ ಸಹಿಯೊಂದಿಗೆ ಅವಿಶ್ವಾಸ ನಿಲುವಳಿಯನ್ನು ತಂದಿದ್ರು. ಜಿಲ್ಲಾಧಿಕಾರಿ ಅಕ್ಟೋಬರ್ 1 ರಂದು ದಿನಾಂಕ ನಿಗದಿ ಮಾಡಿದ್ರು. ಆದ್ರೆ, ಆ ದಿನ ಯಾವ ಸದಸ್ಯರು ಹಾಜರಾಗದ ಕಾರಣ ಅಕ್ಟೋಬರ್ 8 ರಂದು ನಿಲುವಳಿಗೆ ಸೂಚಿಸಿದ್ದರು.
ಈ ವೇಳೆ ಮಾತನಾಡಿರುವ ಅಧ್ಯಕ್ಷ ದಾಸೇಗೌಡ, ಕೆಲವರು ನನ್ನ ಮೇಲೆ ಅವಿಶ್ವಾಸ ನಿಲುವಳಿ ತಂದಿದ್ದು, ಸದಸ್ಯರು ವಾಪಸ್ ಪಡೆದಿರುವುದು ನನಗೆ ಸಂತಸ ತಂದಿದೆ. ನನ್ನ ಜೊತೆಗೆ ಏಳು ಸದಸ್ಯರು ಪರವಾಗಿ ನಿಂತಿದ್ದು, ಎಲ್ಲರೂ ಸೇರಿ ತಾಲೂಕಿನ ಅಭಿವೃದ್ದಿ ಪಥದಲ್ಲಿ ಕೈ ಜೋಡಿಸಬೇಕೆಂದು ಹೇಳಿದರು.