ಪ್ರಜಾಸ್ತ್ರ ಸುದ್ದಿ
ನಾಗಮಂಗಲ: ನಾಗಮಂಗಲ ಟೌನ್ ಪೊಲೀಸರ ಕಾರ್ಯಾಚರಣೆಯಿಂದಾಗಿ ಮೂವರು ಗಾಂಜಾ ಮಾರಾಟಗಾರರು ಸಿಕ್ಕಿಬಿದ್ದಿದ್ದಾರೆ. ಮನೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ.
ರಹಮತ್ ನಗರದ ಜಾವದ ಪಾಷ ಎಂಬುವರ ಹೊಲದಲ್ಲಿ ಗಾಂಜಾ ಸೊಪ್ಪು ಬೆಳೆದು ಮಾರಾಟ ಮಾಡ್ತಿದ್ದ ಇಮ್ರಾಜ ಖಾನ, ಸಯ್ಯದ ಅಜರ, ಮಹಮದ ಜುಹೇಬ ಎಂಬುವವರನ್ನ ಬಂಧಿಸಲಾಗಿದೆ. ಬಂಧಿತರಿಂದ 75 ಸಾವಿರ ಮೌಲ್ಯದ 2 ಕೆಜಿ 650 ಗ್ರಾಂ ಗಾಂಜಾ, 3 ಮೊಬೈಲ್ ಹಾಗೂ 1,900 ನಗದು ವಶ ಪಡಿಸಿಕೊಳ್ಳಲಾಗಿದೆ.
ಮಹಮ್ಮದ್ ಎಂಬಾತ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಅಪರ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ, ಡಿವೈಎಸ್ಪಿ ಕೆ.ಬಿ.ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಕೆ.ರಾಜೇಂದ್ರ, ಪಿಎಸ್ಐ ಎಂ.ಎ.ರವಿಕಿರಣ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಪೋಬೆಷನರಿ ಪಿಎಸ್ಐ ಸಿದ್ದರಾಜು, ಸಿಬ್ಬಂದಿ ರಮೇಶ, ಕುಮಾರ, ಟಿ.ಬಿ.ಕೃಷ್ಣ, ಸಿದ್ದಪ್ಪ, ಉಮೇಶ, ಜೀಪ್ ಚಾಲಕರಾದ ರಾಜೇಶ, ಬಸವರಾಜು, ಮಹೇಂದ್ರಸ್ವಾಮಿ ದಾಳಿಯಲ್ಲಿ ಭಾಗವಹಿಸಿದ್ರು.