ಕವಿಗೋಷ್ಠಿ ಹಾಗೂ ಆಧುನಿಕ ವಚನಗೋಷ್ಠಿ

339

ಪ್ರಜಾಸ್ತ್ರ ಸುದ್ದಿ

ಬೀದರ: ಧರಿನಾಡು ಕನ್ನಡ ಸೇವಾ ಸಂಘ ಕೇಂದ್ರ ಸಮಿತಿ ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡಮಿ ಇವರ ಸಹಯೋಗದಲ್ಲಿ ಸೆಪ್ಟೆಂಬರ್ 27, ಭಾನುವಾರದಂದು ಕವಿಗೋಷ್ಠಿ ಹಾಗೂ ವಚನಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಹಳ್ಳದಕೇರಿ ಕೃಷಿ ಸಂಶೋಧನಾ ಕೇಂದ್ರದ ಹತ್ತಿರದ ಶರಣ ಧಾಮದಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಹಿರಿಯ ಕವಯತ್ರಿ ದಿವಂಗತ ಇಂದುಮತಿ ಬಂಡಿಯವರ ಸ್ಮರಣಾರ್ಥ ಕವಿಗೋಷ್ಠಿ ಮತ್ತು ಆಧುನಿಕ ವಚನಗೋಷ್ಠಿ ನಡೆಯಲಿದೆ.

ಬೀದರ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯ ಅಧಿಕಾರಿ ಶಿವಕುಮಾರ ಕಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಾಲೂಕು ಕಸಾಪ ಅಧ್ಯಕ್ಷ ಎಂ.ಎಸ್ ಮನೋಹರ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಹಿರಿಯ ಸಾಹಿತಿ, ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡಿಯವರು, ಇಂದುಮತಿ ಬಂಡಿಯವರ ಬದುಕು-ಬರಹ ಕುರಿತು ಉಪನ್ಯಾಸ ನೀಡಲಿದ್ದಾರೆ. ಕವಿಗೋಷ್ಠಿ ಹಾಗೂ ವಚನಗೋಷ್ಠಿ ಅಧ್ಯಕ್ಷತೆಯನ್ನ ಕಾದಂಬರಿಗಾರ್ತಿ ಸಾಧಾನಾ ರಂಜೋಳಕರ ವಹಿಸಿಕೊಳ್ಳಲಿದ್ದಾರೆ.

ಇದೆ ವೇಳೆ ಹಲವು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡಮಿ ಅಧ್ಯಕ್ಷ ನಿರಹಂಕಾರ ಬಂಡಿ, ಧರಿನಾಡು ಕನ್ನಡ ಸಂಘ ಕೇಂದ್ರ ಸಮಿತಿ ಅಧ್ಯಕ್ಷ ಚಂದ್ರಪ್ಪ ಹೆಬ್ಬಾಳಕರ ಹಾಗೂ ಕಾರ್ಯದರ್ಶಿ ಚನ್ನಪ್ಪ ಸಂಗೋಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!