ಲವ್ ಜಿಹಾದ್ ಕಾರಣಕ್ಕೆ ಕೊಲೆ: ಆರ್.ಅಶೋಕ್

62

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಲವ್ ಜಿಹಾದ್ ಕಾರಣಕ್ಕೆ ಕೊಲೆಯಾಗಿದೆ ಎಂದು ಯುವತಿಯ ಮನೆಯವರೇ ಹೇಳುತ್ತಿದ್ದರೂ, ಸರ್ಕಾರ ಜಿಹಾದಿಗಳ ರಕ್ಷಣೆಗೆ ನಿಂತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಸ್ಲಿಂ ಮತಾಂಧರು ಹಾಡ ಹಗಲೇ ನೇಹಾ ಅವರನ್ನು ಕೊಂದ ಘಟನೆಯಿಂದ ಇಡೀ ರಾಜ್ಯವೇ ದಿಗ್ಭ್ರಮೆಗೆ ಒಳಗಾಗಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೌಟುಂಬಿಕ ಕಾರಣ ಎಂದು ತೇಪೆ ಸಾರಿಸುತ್ತಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲೆ ಮುಸ್ಲಿಂ ಮತಾಂಧರ ಆಕ್ರಮಣ ಹೆಚ್ಚಿದೆ. ಮೊನ್ನೆಯಷ್ಟೇ ಜೈ ಶ್ರೀರಾಮ್ ಎಂದ ಯುವಕರ ಮೇಲೆ ಹಲ್ಲೆ ಮಾಡಿ ಅಲ್ಲಾಹು ಅಕ್ಬರ್ ಕೂಗುವಂತೆ ಬೆದರಿಕೆ ಹಾಕಿದ್ದರು. ಹನುಮಾನ್ ಚಾಲಿಸ್ ರೆಕಾರ್ಡ್ ಹಾಕಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಮೇಲೆ ದಾಳಿ ಮಾಡಲಾಗಿದೆ. ಶಿವಮೊಗ್ಗದಲ್ಲಿ ಔರಂಗಜೇಬ್ ಕಟೌಟ್ ಹಾಕಿ ಗಲಾಟೆ ಎಬ್ಬಿಸಿದ್ದರು. ಈ ಘಟನೆ ಸಂಬಂಧ ಮುಖ್ಯಮಂತ್ರಿ, ಗೃಹ ಸಚಿವರ ಹೇಳಿಕೆ ನಾಚಿಕೆಗೆಟ್ಟಿದ್ದು ಎಂದು ಕಿಡಿ ಕಾರಿದರು.




Leave a Reply

Your email address will not be published. Required fields are marked *

error: Content is protected !!