ಪ್ರಜಾಸ್ತ್ರ ಸುದ್ದಿ
ದಾಮೋಹ್(ಮಧ್ಯಪ್ರದೇಶ): ದಶಕಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ರಕ್ಷಣಾ ಕ್ಷೇತ್ರವನ್ನು ಕುಗ್ಗಿಸಿತ್ತು. ಬಿಜೆಪಿ ಅದನ್ನು ಬಲಪಡಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ಮಾತನಾಡಿದ ಅವರು, ಭಾರತವು ಅನೇಕ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ರಪ್ತು ಮಾಡುತ್ತಿದೆ. ಆದರೆ, ಭಯೋತ್ಪಾದನೆಯಲ್ಲಿ ತೊಡಗಿದ್ದ ಪಾಕಿಸ್ತಾನ ಈಗ ಆಹಾರಕ್ಕಾಗಿ ಒದ್ದಾಡುತ್ತಿದೆ. ದುರ್ಬಲಗೊಳಿಸಿದ್ದ ರಕ್ಷಣಾ ಕ್ಷೇತ್ರವನ್ನು ನಾವು ಬಲಪಡಿಸುತ್ತಿದ್ದೇವೆ.
ಬಿಜೆಪಿ ದೇಶದ ಬಡವರ ಪರವಿದೆ. ಹೀಗಾಗಿ ಮುಂದಿನ ಐದು ವರ್ಷಗಳ ಕಾಲ ದೇಶದ 80 ಕೋಟಿ ಜನರಿಗೆ ಪಡಿತರ ಯೋಜನೆಯನ್ನು ವಿಸ್ತರಿಸಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಭಾರತ ಜಾಗತಿಕ ಶಕ್ತಿಯನ್ನಾಗಿ ಮಾಡುವ ಗುರಿ ಇದೆ ಎಂದು ಹೇಳಿದರು.