ರಾಮನಗರ: ಬಣ್ಣ ಬಣ್ಣದ ಮಾತುಗಳನ್ನಾಡಿ, ಹಲವು ಪವಾಡಗಳನ್ನ ಮಾಡಿದ್ದೇನೆಂದು ಹೇಳಿಕೊಂಡು ತಿರುಗಾಡುವ ನಿತ್ಯಾನಂದ ಸ್ವಾಮಿ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ. ಇದ್ರಿಂದಾಗಿ ಕೋರ್ಟ್ ಗೆ ಖುದ್ದು ಹಾಜರಿಯಿಂದ ವಿನಾಯಿತಿ ಬಯಸಿದ್ದ ನಿತ್ಯಾನಂದಗೆ ಸಂಕಷ್ಟ ಎದುರಾಗಿದೆ.
ವಿಚಾರಣೆಗೆ ನಿತ್ಯಾನಂದ ಕೋರ್ಟ್ ಗೆ ಬರುತ್ತಿಲ್ಲವೆಂದು ಹೇಳಿ ವಕೀಲ ಲೆನಿನ್ ಕುರುಪ್ಪನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ರು. ಇದನ್ನ ಒಪ್ಪಿಕೊಂಡ ಹೈಕೋರ್ಟ್ ಫೆಬ್ರವರಿ 5ರಂದು ಜಾಮೀನು ರದ್ದು ಮಾಡಿದೆ. ಜಾಮೀನು ವಜಾಗೊಂಡ ಹಿನ್ನೆಲೆಯಲ್ಲಿ ರಾಮನಗರದ 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಖುದ್ದು ಹಾಜರಿಗೆ ಸೂಚಿಸಲಾಗಿದ್ದು, ಜಾಮೀನು ರಹಿತ ವಾರೆಂಟ್ ನೀಡಿದೆ. ಅಲ್ದೇ, ಈ ಬಗ್ಗೆ ಮಾರ್ಚ್ 4ಕ್ಕೆ ವಿಚಾರಣೆಯನ್ನ ಮುಂದೂಡಲಾಗಿದೆ.