ದೇವರಹಿಪ್ಪರಗಿ: ತಾಲೂಕು ಪಟ್ಟಣ ಪಂಚಾಯ್ತಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ಜಿಲ್ಲಾ ಸರ್ವೇಕ್ಷಣಾ ಘಟಕ ವಿಜಯಪುರ ವತಿಯಿಂದ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಸಲಾಯ್ತು.
ಈ ವೇಳೆ ದೇವರಹಿಪ್ಪರಗಿ ತಾಲೂಕು ಆರೋಗ್ಯ ಹಿರಿಯ ಸಹಾಯಕ ಬಿ ಎಸ್ ಡಿಗ್ಗಿ ಮಾತ್ನಾಡಿ, ನೊವೆಲ್ ಕರೋನಾ ವೈರಸ್ ನಿಂದ ಮಾರಣಾಂತಿಕ ಕಾಯಿಲೆ ಹರಡುತ್ತಿದೆ. ಇದನ್ನು ತಡೆಗಟ್ಟಲು ಶುಚಿತ್ವಕ್ಕೆ ಗಮನ ಹರಿಸಬೇಕು. ವ್ಯಯಕ್ತಿಕ ಸ್ವಚ್ಛತೆ ರೋಗಗಳನ್ನ ತಡೆಯಲು ಪ್ರಮುಖ ಪಾತ್ರ ವಹಿಸುತ್ತದೆ ಅಂತಾ ಹೇಳಿದ್ರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಪಟ್ಟಣ ಪಂಚಾಯ್ತಿ ಪೌರ ಕಾರ್ಮಿಕರು ಭಾಗವಹಿಸಿದ್ರು.