ಹಳ್ಳದಲ್ಲಿ ಕೊಚ್ಚಿಹೋದ ದೇ.ಹಿಪ್ಪರಗಿ ರೈತ ಶವವಾಗಿ ಪತ್ತೆ

730

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ಗುರುವಾರ ಬೆಳಗ್ಗೆ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ತಾಲೂಕಿನ ಮುಳಸಾವಳಗಿ ಗ್ರಾಮದ ರೈತ ಶವವಾಗಿ ಪತ್ತೆಯಾಗಿದ್ದಾನೆ. 36 ವರ್ಷದ ಶಿವಪುತ್ರ ಹನುಮಂತ ನಾಟೀಕಾರ ಮೃತ ರೈತನಾಗಿದ್ದಾನೆ.

ಇಂದು ಬೆಳಗ್ಗೆ ಜಮೀನಿಗೆ ಹೋಗುವಾಗ ಹಳ್ಳದ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಅಗ್ನಿ ಶಾಮಕ ದಳದ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಾಚರಣೆ ನಡೆಸಿ, ಶವವನ್ನ ಪತ್ತೆ ಹಚ್ಚಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತ ರೈತನಿಗೆ ಮೂವರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಕಾರ್ಯಾಚರಣೆ ವೇಳೆ ತಹಶೀಲ್ದಾರ್ ಬಿ.ಎಸ್ ಕಡಕಭಾವಿ ಹಾಗೂ ಪಿಎಸ್ಐ ರವಿ ಯಡವಣ್ಣವರ ಹಾಜರಿದ್ರು. ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸುವ ಭರವಸೆವನ್ನ ಅಧಿಕಾರಿಗಳು ನೀಡಿದ್ರು.




Leave a Reply

Your email address will not be published. Required fields are marked *

error: Content is protected !!